ಇನೋವಾ ಕಾರಿಗೆ ಲಾರಿಯೊಂದು ಡಿಕ್ಕಿ ಪರಿಣಾಮ ನವ ವರ ಸೇರಿ ಮೂರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ತುರುವೇಕೆರೆ ಸಮೀಪದ ಚಿಕ್ಕ ಶೆಟ್ಟಿಕೆರೆ ಬಳಿ ಸಂಭವಿಸಿದೆ.
ನವ ವಧು ಮಂದಾರ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಸಿಕೆರೆ ತಾಲೂಕು ಕಮಲಾಪುರ ನಿವಾಸಿ ನಂಜುಂಡಪ್ಪನವರ ಮಗ ಪ್ರಸನ್ನ ಕುಮಾರ್ (30)ಸಂತೋಷ್ ( 30) ಹಾಗೂ ಚಾಲಕ ಚಿನ್ನಪ್ಪ ಸಾವನ್ನಪಿದವರು.
ಕಳೆದ ಒಂದುವಾರದ ಹಿಂದಷ್ಟೇ ಮೈಲಾಪುರ ನಿವಾಸಿ ಮಂದಾರ ಜೊತೆ ಪ್ರಸನ್ನ ಕುಮಾರನಿಗೆ ವಿವಾಹ ಮಾಡಿಕೊಡಲಾಗಿತ್ತು.
ತಮ್ಮ ಹಳ್ಳಿಯಿಂದ ಬೆಂಗಳೂರಿಗೆ ಮನೆಯ ಅಗತ್ಯ ವಸ್ತುಗಳನ್ನು ತರಲು ಇಂದು ಬೆಳಗಿನ ಜಾವ ಅರಸಿಕೆರೆ ಕಡೆ ಹೊರಟಾಗ ಚಿಕ್ಕ ಶೆಟ್ಟಿಕೆರೆ ಕಡೆ ಮೈಸೂರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿದೆ
ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ