ನಾಗಮಂಗಲದಲ್ಲಿ ದುರಂತ :ಪತಿ ಕೊರೋನಾಗೆ ಬಲಿ – ನೊಂದ ಪತ್ನಿಯೂ ಆತ್ಮಹತ್ಯೆ

Team Newsnap
1 Min Read

ಪತಿ ಕೊರೋನಾಗೆ ಬಲಿಯಾದ ಮೇಲೆ ಅಂತ್ಯ ಸಂಸ್ಕಾರ ಮುಗಿಸಿ ಬಂದ ಪತ್ನಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗಮಂಗಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ಜರುಗಿದೆ.

ಕಳೆದ 11 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಕಿರಣ್ ಹಾಗೂ ಪೂಜಾ ದುರಂತ ಸಾವು ಕಂಡಿದ್ದಾರೆ.

ಕಿರಣ್ ಮತ್ತು ಪೂಜಾ ವಿವಾಹ ಮಾಡಿಕೊಂಡು ಬೆಂಗಳೂರಿನ ಬೊಮ್ಮನಹಳ್ಳಿ ಯಲ್ಲಿ ವಾಸವಾಗಿದ್ದರು.

ಕೊರೋನಾ ಸೋಂಕಿಗೆ ಒಳಗಾಗಿದ್ದ ಕಿರಣ್ ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಕಿರಣ್ ನನ್ನು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದರು.

ಮೃತದೇಹವನ್ನು ಸ್ವ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಿ ಮನೆಗೆ ಹಿಂತಿರುಗಿದ ಮೇಲೆ ಕಿರಣ್ ಪತ್ನಿ ಪೂಜಾ ಕೂಡ ರೂಂಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

Share This Article
Leave a comment