ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು ರಾತ್ರಿ ಗೋಚರಿಸಲಿದೆ ಇದು ಅತಿ ದೊಡ್ಡ ಖಗೋಳ ಘಟನೆಗಳಲ್ಲಿ ಒಂದಾಗಿದೆ. ಚಂದ್ರ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಇರಲಿದೆ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತಾನೆ.
ಸೂಪರ್ಮೂನ್ ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಸಂಭವಿಸುತ್ತವೆ. ಇದನ್ನು ‘ಸ್ಟ್ರಾಬೆರಿ ಮೂನ್’ ಎಂದೂ ಕರೆಯುತ್ತಾರೆ. ಈ ಬಾರಿಯ ಸೂಪರ್ ಮೂನ್ ಅನ್ನು ಬಕ್ ಸೂಪರ್ ಮೂನ್, ಥಂಡರ್ ಸೂಪರ್ ಮೂನ್, ಹೇ ಮೂನ್, ಮೀಡ್ ಮೂನ್ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಹುಣ್ಣಿಮೆಯ ದಿನ ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಅಂದರೆ ಅಂದು ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇರುತ್ತದೆ. ಸೂರ್ಯನ ಪ್ರಕಾಶದಲ್ಲಿ ಇಡೀ ಚಂದ್ರ ಹೊಳೆಯುತ್ತಿರುವುದನ್ನು ಭೂಮಿಯಿಂದ ಕಾಣಬಹುದು. ಇದೇ ಸೂಪರ್ಮೂನ್ ವೈಶಿಷ್ಠ್ಯ.
ಚಂದ್ರನು ಪ್ರತಿದಿನಕ್ಕಿಂತ ದೊಡ್ಡದಾಗಿ, ಪ್ರಕಾಶಮಾನವಾಗಿ ಮತ್ತು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಇದಲ್ಲದೇ, ಸೂಪರ್ ಮೂನ್ ಸಂಭವಿಸಿ ಕೆಲವು ಗಂಟೆಗಳ ನಂತರ ಹುಣ್ಣಿಮೆ ಕಾಣಿಸಲಿದೆ 2-3 ದಿನಗಳವರೆಗೆ ಇದನ್ನು ನೋಡಬಹುದಾಗಿದೆ.
‘ಸೂಪರ್ಮೂನ್’ ಎಂಬ ಪದವನ್ನು 1979 ರಲ್ಲಿ ರಿಚರ್ಡ್ ನೊಲ್ಲೆ ಎಂಬುವವರು ಹುಟ್ಟುಹಾಕಿದರು. ಭೂಮಿ ಮತ್ತು ಚಂದ್ರನ ನಡುವಿನ ಅಂತರವು 4,05,500 ಕಿ.ಮೀ. ಸೂಪರ್ ಮೂನ್ ಎಂಬ ಪದವು 1979 ರಲ್ಲಿ ಹುಟ್ಟಿಕೊಂಡಿತು. ಈ ಪದವನ್ನು ಜ್ಯೋತಿಷಿ ರಿಚರ್ಡ್ ನೋಯೆಲ್ ಸೃಷ್ಟಿಸಿದರು. ಚಂದ್ರನು ಭೂಮಿಯ ಪರಿಧಿಯ 90 ಪ್ರತಿಶತದೊಳಗೆ ಬಂದಾಗ, ಈ ಖಗೋಳ ಘಟನೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇಂದು ಮಧ್ಯರಾತ್ರಿ 12.08 ಕ್ಕೆ ಸೂಪರ್ ಮೂನ್ ವೀಕ್ಷಿಸಬಹುದಾಗಿದೆ.
ಈ ಸೂಪರ್ಮೂನ್ ಅನ್ನು ಇಂದು ಮಧ್ಯರಾತ್ರಿ 12:07 ಕ್ಕೆ ನೋಡಬಹುದು, ಇಂದು ಮಿಸ್ ಆದರೆ ನೀವು 2023ರ ಜುಲೈ 3ರ ವರೆಗೆ ಕಾಯಬೇಕಿದೆ.
ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಸಂಗಮದ ಬಳಿ ಬುಧವಾರ ಜರುಗಿದೆ.
ನದಿಯಲ್ಲಿ ಕೊಚ್ಚಿ ಹೋದ ಯುವಕನನ್ನು ಅಶೋಕ್ (26) ಎಂದು ಗುರುತಿಸಲಾಗಿದೆ ಬೆಂಗಳೂರಿನ ಯಲಹಂಕ ನಿವಾಸಿ
ಕುಟುಂಬಸ್ಥರು, ಸ್ನೇಹಿತರೊಂದಿಗೆ ಪೂಜೆಗಾಗಿ ಸಂಗಮಕ್ಕೆ ಆಗಮಿಸಿದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು,
ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿದ ಯುವಕ ಕೊಚ್ಚಿ ಹೋಗಿದ್ದಾನೆ. ನದಿ ನೀರಿನ ರಭಸ ಹೆಚ್ಚಿದ್ದ ಯುವಕನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೋಟ್, ಪಾತಾಳ ಗರಡಿ ಬಳಸಿ ಹುಡುಕಾಟ ನಡೆಸಲಾಗುತ್ತಿದೆ , ಪ್ರತ್ಯೇಕ ತಂಡಗಳಾಗಿ ಶೋಧ ನಡೆಸಲಾಗುತ್ತಿದೆ.
ಸೂಪರ್ ಮೂನ್ ಸೂಪರ್ ಮೂನ್ ಸೂಪರ್ ಮೂನ್ ಸೂಪರ್ ಮೂನ್ ಸೂಪರ್ ಮೂನ್ ಸೂಪರ್ ಮೂನ್ ಸೂಪರ್ ಮೂನ್
ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಮಹತ್ವ ನೀಡಲಾಗಿದೆ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಆಷಾಡ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆಯಂದು ಗುರುಪೌರ್ಣಿಮಾ ಆಚರಿಸಲಾಗುತ್ತದೆ.
ವೇದವ್ಯಾಸರು ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು.ವೇದ ವ್ಯಾಸರು ಉತ್ತಮ ಲೇಖಕ, ಜ್ಞಾನಿ, ಗುರು ಹಾಗೂ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಇವರ ಪಾತ್ರ ಶ್ರೇಷ್ಠವಾಗಿದೆ. ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.
ಗುರುವಿನ ಆಶೀರ್ವಾದ ಅಥವಾ ಹಾರೈಕೆಯು ಇದ್ದರೆ ವ್ಯಕ್ತಿ ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು. ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ. ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ “ಗು” ಅಂದರೆ ಅಂಧಕಾರ ಅಥವಾ ಅಜ್ಞಾನ. “ರು” ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ.
ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು.
ಪುರಂದರದಾಸರು ಹೇಳಿರುವ ಹಾಗೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಒಬ್ಬ ಮನುಷ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಸರಿಯಾದ ಹಾದಿಯಲ್ಲಿ ಸಾಗಿ ಆತ್ಮೋನ್ನತಿ ಹೊಂದಲಾರ ಎಂಬುದು ಇದರ ಅರ್ಥ.
ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.
ಹುಟ್ಟಿದ ಮಗುವಿಗೆ ಆರಂಭದಲ್ಲಿ ಎಲ್ಲವನ್ನೂ ತಿಳಿಸಿಕೊಡುವವಳು ತಾಯಿ. ತಾಯಿಯೇ ಮಗುವಿನ ಮೊದಲ ಗುರು. ತಾಯಿ ಉತ್ತಮ ಜ್ಞಾನ ಹಾಗೂ ಸಂಸ್ಕಾರದ ವರ್ತನೆಯನ್ನು ತಿಳಿದಿದ್ದರೆ ಮಗುವು ಸಹ ಅವುಗಳನ್ನು ಕಲಿಯುತ್ತದೆ. ಜೀವನದಲ್ಲಿ ಅತ್ಯುತ್ತಮ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಂತರದ ಹಂತದಲ್ಲಿ ವಿದ್ಯೆ ಕಲಿಸುವ ಗುರುವು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಮನುಷ್ಯನನ್ನು ಅತ್ಯಾಧುನಿಕ ವ್ಯಕ್ತಿಯನ್ನಾಗಿ ಮಾಡಲು ಉತ್ತಮ ಗುಣಗಳನ್ನು ಮತ್ತು ಅವರ ಬೋಧನೆಗಳನ್ನು ನೀಡುವವರು ಗುರುಗಳು.
ಒಬ್ಬ ವ್ಯಕ್ತಿಯ ಮೊದಲ ಗುರು ಶಿಕ್ಷಕ ಅಥವಾ ತಾಯಿ. ತಾಯಿ ಮಗುವಿಗೆ ಜೀವನದ ನಿಜವಾದ ಮೌಲ್ಯವನ್ನು ಅರ್ಥಮಾಡಿಸಿಕೊಡುತ್ತಾಳೆ. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ತಿಳಿಸಿಕೊಡುವಳು. ಬಾಲ್ಯದಲ್ಲಿ ಅವಳು ನೈತಿಕ ಮೌಲ್ಯಗಳನ್ನು ಅವನಲ್ಲಿ ತುಂಬುತ್ತಾಳೆ, ನಂತರ ಶಿಕ್ಷಕರ ರೂಪದಲ್ಲಿ ಗುರುಗಳಿಂದ ಮಗುವಿಗೆ ಭೋದನಾ ಶಿಕ್ಷಣ ದೊರೆಯುತ್ತದೆ. ಆದ್ದರಿಂದ ಗುರುಗಳನ್ನು ಗೌರವಿಸುವ ಮೂಲಕ ಈ ದಿನದ ಆಚರಣೆ ಅತ್ಯಗತ್ಯವಾಗುತ್ತದೆ. ಗುರುಗಳು-ಪೋಷಕರು, ಶಿಕ್ಷಕರು ಮತ್ತು ನಮ್ಮ ಹಿತೈಷಿಗಳ ಸರಿಯಾದ ಬೋಧನೆಗಳು ಮತ್ತು ಆಶೀರ್ವಾದಗಳು ಮಾತ್ರ ನಮ್ಮನ್ನು ಸುಸಂಸ್ಕೃತ ಮತ್ತು ಪರಿಷ್ಕೃತ ವ್ಯಕ್ತಿಯನ್ನಾಗಿ ಮಾಡಬಹುದು.
ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧ ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ.
ಒಟ್ಟಿನಲ್ಲಿ ಮನುಷ್ಯ ಸರಿಯಾದ ದಾರಿಯಲ್ಲಿ ನಡೆದು ಬದುಕಿನಲ್ಲಿ ಏನಾದರೂ ಮಹತ್ತರ ಸಾಧಿಸಲು ಅವನ ಮುಂದೆ ನಿಶ್ಚಲವಾದ ಗುರಿ ಬೇಕು. ಹಿಂದೆ ಬೆಂಗಾವಲಾಗಿದ್ದು ಮನ್ನಡೆಸಲು ಸರಿಯಾದ ಗುರು ಇದ್ದೇ ಇರಬೇಕು. ಯಾರು ಸರಿಯಾದ ಗುರು ಮತ್ತು ಗುರಿಯನ್ನು ಆರಿಸಿಕೊಳ್ಳುತ್ತಾರೋ ಅವರ ಜೀವನ ನಿಜಕ್ಕೂ ಧನ್ಯ! ಯಶಸ್ಸು ಅವರ ಪಾಲಿಗೆ ಶತಸಿದ್ದ .
ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More
ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More
ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
This website uses cookies.
Leave a Comment