Editorial

ಬಾಳೆಕಾಯಿ ತಿನ್ನುಲು ಇಷ್ಟ ಇಲ್ಲದೆ ಇರುವವರು ಈ ರೀತಿ ಮಾಡಿ ನೋಡಿ.

▪️ರಾ ಬನಾನ ಕೋಫ್ತ▪️

▪️ಬೇಕಾದ ಪದಾರ್ಥಗಳು▪️

  1. ಬಾಳೆಕಾಯಿ 2
  2. ಈರುಳ್ಳಿ 2
  3. ಕೊತ್ತಂಬರಿಸೊಪ್ಪು ಸ್ವಲ್ಪ
  4. ಹಸಿಮೆಣಸಿನಕಾಯಿ 2
  5. ಕಡಲೇ ಹಿಟ್ಟು 2 ಚಮಚ
  6. ಅರಿಶಿಣ ಪುಡಿ ಕಾಲ್ ಚಮಚ
  7. ಖಾರದ ಪುಡಿ ಅರ್ಧ ಚಮಚ
  8. ರುಚಿಗೆ ತಕ್ಕಷ್ಟು ಉಪ್ಪು
  9. ಎಣ್ಣೆ ಶಾಲು ಫ್ರೈ ಮಾಡಲು

▪️ರುಬ್ಬಲು▪️

  1. ಟೋಮೋಟೋ 2
  2. ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಚಮಚ

▪️ಒಗ್ಗರಣೆಗೆ▪️

  1. ಸಾಸಿವೆ ಅಧ೯ ಚಮಚ
  2. ಎಣ್ಣೆ 4 ಚಮಚ
  3. ಒಣಮೆಣಸಿನಕಾಯಿ 1
  4. ಹಸಿಮೆಣಸಿನಕಾಯಿ 1
  5. ಈರುಳ್ಳಿ 1
  6. ಕೊತ್ತಂಬರಿ ಪುಡಿ 1 ಚಮಚ
  7. ಕೊತ್ತಂಬರಿ ಸೊಪ್ಪು ಸ್ವಲ್ಪ
  8. ಉಪ್ಪು ರುಚಿಗೆ ತಕ್ಕಷ್ಟು

▪️ವಿಧಾನ▪️

ಮೊದಲಿಗೆ 1 ಅಗಲವಾದ ಪಾತ್ರೆಯಲ್ಲಿ 2 ಬಾಳೆಕಾಯಿ ಇಟ್ಟು ಮುಳುಗುವಷ್ಟು ನೀರು ಹಾಕಿ 10 ನಿಮಿಷಗಳ ಕಾಲ ಬೇಯಿಸಿ ಆರಿದ ನಂತರ 1 ಬಟ್ಟಲಿನಲ್ಲಿ ಬಾಳೆಕಾಯಿಯ ಸಿಪ್ಪೆ ತೆಗೆದು ಚನ್ನಾಗಿ ಕಿವಿಚಿ ಅದಕ್ಕೆ ಕಡಲೇ ಹಿಟ್ಟು ಕಟ್ ಮಾಡಿದ ಈರುಳ್ಳಿ,ಅರಿಶಿಣ ಪುಡಿ,ಖಾರದ ಪುಡಿ ಕೊತ್ತಂಬರಿ ಸೊಪ್ಪು,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.

ನಂತರ 1 ಬಾಣಲಿಗೆ 4 ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ನಂತರ ಈರುಳ್ಳಿ ಮೆಣಸಿನಕಾಯಿ,ಕರೀಬೇವು ಕೊತ್ತಂಬರಿ ಪುಡಿ ರುಚಿಗೆ ತಕ್ಕಷ್ಟು ಉಪ್ಪು,ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ ಬಾಡಿಸಿ,ರುಬ್ಬಿಕೊಂಡ ಟೋಮೋಟೋ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕುದಿಸಿ ಈ ಮಧ್ಯೆ ಶಾಲು ಫ್ರೈ ಮಾಡಿದ ಬಾಳೆಕಾಯಿ ಉಂಡೆಗಳನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು 1 ಸುತ್ತು ಕುದಿಸಿ ಕೈಯಾಡಿಸಿ ಸ್ಟವ್ ನಿಲ್ಲಿಸಿದರೆ,ಚಪಾತಿ,ಅನ್ನ, ರೊಟ್ಟಿ,ಮುದ್ಥೆಯ ಜೊತೆಗೆ ರುಚಿಯಾದ ಬಾಳೆಕಾಯಿ ಕೋಫ್ತ ಸವಿಯಲು ಸಿದ್ಧ.

ಕೆ ವಿಜಯಸುದರ್ಶನ್
ಅರಳುಮಲ್ಲಿಗೆ

Team Newsnap
Leave a Comment

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024