ಹೆಂಡತಿಯ ಕೊಲೆ ಮಾಡಲು ಗಂಡನಿಗೆ ಕನ್ನಡದ ಆ ಎರಡು ಕನ್ನಡ ಸಿನಿಮಾಗಳೆ ಪ್ರೇರಣೆ

Team Newsnap
2 Min Read

ಹೆಂಡತಿಯನ್ನು ಕೊಲೆ ಮಾಡಲು ಎರಡು ಸಿನಿಮಾಗಳ ದೃಶ್ಯಗಳನ್ನು ಅನುಸರಿಸಲು ಹೋಗಿ ವಿಫಲನಾದ ಗಂಡ ಕೊನೆಗೆ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಜರುಗಿದೆ.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಪತಿಯಿಂದಲೇ ಪತ್ನಿ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.

ಆರೋಪಿ ವಿಚಾರಣೆ ವೇಳೆ ಕೊಲೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ. ಇನ್ನು ಪತ್ನಿಯ ಕೊಲೆಗೆ ಪ್ಲಾನ್ ಮಾಡಲು ದಾರಿ ತೋರಿದ್ದು ಆ ಎರಡು ಸಿನಿಮಾಗಳ ದೃಶ್ಯಗಳು ಎನ್ನಲಾಗಿದೆ.

ಆರೋಪಿ ಕಾಂತರಾಜ್​ ಪತ್ನಿ ರೂಪಾ ಕೊಲೆಗೆ ಸಂಬಂಧಿಸಿದಂತೆ ವಿಚಿತ್ರ ಪ್ಲಾನ್​ಗಳನ್ನು ಪೊಲೀಸರ ಮುಂದೆ ಹೇಳಿದ್ದಾನೆ.

ಪತ್ನಿ ಹತ್ಯೆನ ಮಾಡಲು ಎರಡು ದಿನದ ಟ್ರಿಪ್ ಪ್ಲಾನ್:

ಕನ್ನಡದ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’. ಈ ಸಿನಿಮಾದ ಒಂದು ಸೀನ್ ಪತ್ನಿ ಹತ್ಯೆಗೆ ಸ್ಕೆಚ್ ಹಾಕಲು ಕಾರಣವಾಗಿತ್ತು ಎನ್ನಲಾಗಿದೆ.

ಹೆಂಡತಿಯ ಕೊಲೆಗೆ 15 ದಿನದ ಹಿಂದೆಯೇ ಪತಿ ಪ್ಲಾನ್​ ರೂಪಿಸಿದ್ದ. 6 ಜನ ಸ್ನೇಹಿತರೊಂದಿಗೆ ಟ್ರಿಪ್​ಗೆ ಪ್ಲಾನ್ ಮಾಡಿ ಮುಹೂರ್ತ ಇಟ್ಟಿದ್ದ.

ಕೊಲೆ ಹಿಂದಿನ ಸ್ಫೋಟಕ ರಹಸ್ಯ..!:

ಟ್ರಿಪ್​ಗೆ ಹೋಗೋಣ ಎಂದು ಪತ್ನಿಯನ್ನು ಜೋಗಕ್ಕೆ ಕರೆದೊಯ್ದಿದ್ದ. ಜಲಪಾತ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದೊಯ್ದು ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ ಎನ್ನಲಾಗಿದೆ.

ಈ ವೇಳೆ ಎತ್ತರದ ಸ್ಥಳದಲ್ಲಿ ತಲೆ ತಿರುಗುತ್ತದೆ ಎಂದು ಪತ್ನಿ ಹೇಳಿ, ಎತ್ತರದ ಪ್ರದೇಶಕ್ಕೆ ಹೋಗಲೇ ಇಲ್ವಂತೆ. ಹೀಗೆ ಮೂರು ದಿನ ಕೊಲೆ ಮಾಡೋಕೆ ಪ್ರಯತ್ನ ಮಾಡಿದ್ದರೂ ಪ್ಲಾನ್ ಸಕ್ಸಸ್ ಆಗಿರಲಿಲ್ಲ. ಬಳಿಕ ಮತ್ತೊಂದು ಪ್ಲಾನ್​ಗೆ  ಪ್ರೇರಣೆಯಾಗಿದ್ದು ‘ಯುಗಪುರುಷ’ ಸಿನಿಮಾ ದೃಶ್ಯ ವಂತೆ.

ಆ ಸಿನಿಮಾದಲ್ಲಿ ಪತಿಯನ್ನು ಕಾರಿನಲ್ಲಿ ಗುದ್ದಿ ಕೊಲೆ ಮಾಡಿದ ರೀತಿಯೇ ಸ್ಕೆಚ್ ಹಾಕಿದ್ದ ಚಾಲಾಕಿ ಪತಿರಾಯ.  ಜೊತೆಯಲ್ಲಿ ಜನ ಇದ್ದಿದ್ದರಿಂದ ಅದು ಕೂಡ ಸಾಧ್ಯವಾಗಿರಲಿಲ್ಲ ಅಂತಾ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆ ಕೋಪದಿಂದ ಮನೆಗೆ ಬಂದಿದ್ದ ಪತಿ ಕಾಂತರಾಜ್, ಮನೆಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದನಂತೆ.

ಮನೆಯಲ್ಲಿ ನೇಣು ಹಾಕಿ ಕೊಂಡಿರುವಂತೆ ಬಿಂಬಿಸಲು ಪ್ಲಾನ್ ಮಾಡಿದ್ದ. ಅದು ಕೂಡ ಫ್ಲಾಪ್ ಆದ ಹಿನ್ನೆಲೆಯಲ್ಲಿ ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಪೊಲೀಸರು ಮನೆಗೆ ಭೇಟಿಕೊಟ್ಟ ವೇಳೆ ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಎಸ್ಕೇಪ್ ಆಗಿದ್ದ. ವಿಚಾರಣೆ ವೇಳೆ ಇವಿಷ್ಟು ಮಾಹಿತಿಯನ್ನ ಆರೋಪಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

Share This Article
Leave a comment