ದೋಚಲು ಏನೂ ಇರಲಿಲ್ಲ – ಕೊನೆಗೆ ಹಲ್ಲೆ ಮಾಡಿ, ರೇಪ್ ಮಾಡಿದೆವು – 7 ಅರೋಪಿ ಹೇಳಿದ್ದು

Team Newsnap
1 Min Read

ಯುವಕ – ಯುವತಿ ಬಳಿ ಹಣ ದೋಚಲು ಹೋದೆವು. ಆದರೆ ಅವರ ಬಳಿ ಹಣ ಇರಲಿಲ್ಲ. ಆದ್ದರಿಂದ ಹಲ್ಲೆ ನಡೆಸಿ, ನಂತರ ಅತ್ಯಾಚಾರ ಮಾಡಿ ಪರಾರಿಯಾಗಿದ್ದೆವು.

  • ಇದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 7ನೇ ಆರೋಪಿಯನ್ನು ಪೋಲಿಸರ ಮುಂದೆ ಹೇಳಿದ ಸತ್ಯ.

7ನೇ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 10 ದಿನ ತಮ್ಮ ವಶಕ್ಕೆ ಪಡೆದಿದ್ದಾರೆ.

ಏಳನೇ ಆರೋಪಿಯಿಂದಲೇ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ. ಎರಡು ದಿನದ ಹಿಂದೆ ತಮಿಳುನಾಡಿನ ತಿರುಪ್ಪೂರುನಲ್ಲಿ ಇವನನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣದಲ್ಲಿ ಬಂಧಿತನಾಗಿರುವ ಅಪ್ರಾಪ್ತನ ಜೊತೆ ಈ ಆರೋಪಿ ಕೂಲಿ ಕೆಲಸ ಮಾಡಿಕೊಂಡಿದ್ದ. ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಂಜೆ ಎಣ್ಣೆ ಪಾರ್ಟಿ ಮಾಡುತ್ತಿದ್ದೆವು. ನಂತರ ನಿರ್ಜನ ಪ್ರದೇಶದಲ್ಲಿದ್ದವರನ್ನು ದೋಚುತ್ತಿದ್ದೆವು.

ಆ ದಿನವೂ ನಾವು ಈ ಯುವಕ ಯುವತಿ ಬಳಿ ಏನಾದರೂ ಇದ್ದರೆ ದೋಚುವ ಪ್ಲಾನ್ ಮಾಡಿದೆವು. ಅವರ ಬಳಿ ಏನೂ ಇರಲಿಲ್ಲ. ಕೊನೆಗೆ ಇಬ್ಬರ ಮೇಲೂ ಹಲ್ಲೆ ಮಾಡಿ , ಯುವತಿ ಮೇಲೆ ಅತ್ಯಾಚಾರ ಮಾಡಿದೆವು ಎಂದು ಹೇಳಿದ್ದಾನೆ ಎಂದು ಪೋಲಿಸ್ ಮೂಲಗಳು ಹೇಳಿವೆ.

Share This Article
Leave a comment