ಮೊಬೈಲ್ ಹೆಚ್ಚು ಬಳಕೆ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದಕ್ಕೆ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಬ್ಬುವಾಡದಲ್ಲಿ ಜರುಗಿದೆ, ಮೇಘ (20) ಆತ್ಮಹತ್ಯೆ ಶರಣಾದ ಯುವತಿ. ಮೃತ ಯುವತಿಯ ಕುಟುಂಬ ಮೂಲತಃ ಸಿದ್ದಾಪುರ ತಾಲೂಕಿನವರು. ಹಬ್ಬುವಾಡದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬಸ್ಥರು ವಾಸವಾಗಿದ್ದರು.
ಮೇಘ ಪ್ಯಾರಾಮೆಡಿಕ್ ಕೋರ್ಸ್ ಮುಗಿಸಿಕೊಂಡು ಮನೆಯಲ್ಲಿದ್ದಳು ಸದಾ ಮೊಬೈಲ್ ಬಳಕೆ ಮಾಡುತ್ತಿದ್ದನ್ನು ಪೋಷಕರು ಬೈದು ಬುದ್ದಿ ಹೇಳಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.