ಕ್ಷುಲ್ಲಕ ಕಾರಣ – ಅಜ್ಜಿ, ಮೊಮ್ಮಗಳ ನಡುವೆ ಜಗಳ.. ಸಾವಿನಲ್ಲಿ ಅಂತ್ಯ

Team Newsnap
1 Min Read

ಕ್ಷುಲ್ಲಕ ಕಾರಣಕ್ಕೆ ಅಜ್ಜಿ, ಮೊಮ್ಮಗಳ ನಡುವೆ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ಜರುಗಿದೆ

ಮಮತ(25) ಮತ್ತು ಜಯಮ್ಮ(70) ಮೃತ ದುರ್ದೈವಿಗಳು.

ಇತ್ತೀಚೆಗೆ ಮೊಮ್ಮಗಳ ಎರಡು ತಿಂಗಳ ಮಗು ಮೃತಪಟ್ಟಿತ್ತು .ನಿನ್ನೆ ಸಂಜೆ ಕ್ಷುಲ್ಲಕ ಕಾರಣಗಳಿಗೆ ಅಜ್ಜಿ ಮತ್ತು ಮೊಮ್ಮಗಳ ನಡುಗೆ ಜಗಳ ನಡೆದಿದೆ.

ಅಜ್ಜಿ ಮೇಲೆ ಕೋಪಗೊಂಡ ಮೊಮ್ಮಗಳು ಅಜ್ಜಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಜ್ಜಿಯ ತಲೆ ಮನೆ ಗೋಡೆಗೆ ತಗುಲಿ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಅಜ್ಜಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೊಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಜ್ಜಿ ಮೊಮ್ಮಗಳ ನಡುವೆ ಕ್ಷುಲ್ಲಕ ಕಾರಣಗಳಿಗೆ ನಡೆದ ಜಗಳ ಕೊನೆಗೂ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ.

ಅಜ್ಜಿ ಸಾವಿನ ನಂತರ ಹಲ್ಲೆ ಮಾಡಿದ್ದ ಮೊಮ್ಮಗಳು ಕೂಡ ನೇಣಿಗೆ ಶರಣಾಗಿದ್ದಾರೆ. ಮೃತ ಯುವತಿಯ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಜ್ಞಾನ ಭಾರತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment