ಶಿಕ್ಷಣದ ವ್ಯವಸ್ಥೆಯೇ ಸರಿ ಇಲ್ಲ

Team Newsnap
1 Min Read

ಸೆಲ್ಫಿ ವೀಡಿಯೋ ಮಾಡಿ ತಾಂತ್ರಿಕ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ,

ಈಗಿನ ಶಿಕ್ಷಣ ವ್ಯವಸ್ಥೆಯೇ ಸರಿ ಇಲ್ಲ. ಅದು ಸುಧಾರಣೆ ಆಗ ಬೇಕು. ಈಗಿನ ಎಜುಕೇಶನ್ ಸಿಸ್ಟಂ ಇದ್ದರೂ ಇಲ್ಲದಂತಾಗಿದೆ ಎಂದು ಸಿಎಂ ಮತ್ತು ವಿಶ್ವವಿದ್ಯಾಲಯಗಳ ವಿಸಿಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ಜರುಗಿದೆ.

ಅರಸಿಕೆರೆಯಹೇಮಂತ್ ಗೌಡ(20) ಮೃತ ದುರ್ದೈವಿ. ಹಾಸನದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಈತ, ನಿನ್ನೆ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೇಮಂತ್ ಗೌಡ ಸಾಯುವ ಮುನ್ನವೇ ಸುಮಾರು 13 ನಿಮಿಷ ಸೆಲ್ಫಿ ವೀಡಿಯೋ ಮಾಡಿದ್ದಾನೆ. ಅದರಲ್ಲಿ ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಎಜುಕೇಶನ್ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ ಎಂದು ಕೋರಿದ್ದಾನೆ.

Share This Article
Leave a comment