ಇದನ್ನು ಓದಿ :ರಾತ್ರಿ ರಹಸ್ಯ ಸಭೆ ನಡೆಸಿ ಇಂದು ದಿಢೀರ್ ದೆಹಲಿಗೆ ಹೊರಟ ಸಿಎಂ
ಬಿಬಿಎಂಪಿಗೆ ಕುರಿತಂತೆ ಶುಕ್ರವಾರ ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆಯನ್ನು 9 ವಾರಗಳ ಬಳಿಕ ಚುನಾವಣೆ ನಡೆಸಲು ಸೂಚಿಸಿದೆ
ನ್ಯಾ. ಕಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ವಾರ್ಡ್ಗಳ ಪುನರ್ ವಿಂಗಡಣೆ ಮತ್ತು ಓಬಿಸಿ ಸೀಟುಗಳ ನಿರ್ಣಯಕ್ಕೆ ಎಂಟು ವಾರಗಳ ಸಮಯ ಬೇಕು ಎಂದು ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿತು.
ಸರ್ಕಾರದ ವಾದ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರದ ತಯಾರಿಯ ಒಂದು ವಾರದ ಬಳಿಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಶೀಘ್ರದಲ್ಲೇ ಚುನಾವಣೆ ನಡೆಸಲು ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜು ಸಲ್ಲಿಸಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಿತು.