ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ ಎಂಟು ದಿನಗಳಾಗಿವೆ. ಈ ನಡುವೆ ಕೊಡಗಿನ ಓರ್ವ ವಿದ್ಯಾರ್ಥಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಮೊಹಮ್ಮದ್ ಯೂಸುಫ್ ಅವರ ಪುತ್ರ ಶಾರುಖ್ ಅವರು, ಕಳೆದ ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಮನೆಯಲ್ಲಿ ಇರುವ ಕುಟುಂಬಸ್ಥರು ಕಂಗಾಲಾಗಿದ್ದಾರೆ
ನಮ್ಮ ಮಗ ನಾಲ್ಕು ದಿನಗಳ ಕಾಲ ಬಂಕರ್ನಲ್ಲಿ ಆಸರೆ ಪಡೆದಿದ್ದ ಶಾರುಖ್ ಸೇರಿ 20 ಯುವಕರು ಬಂಕರ್ನಲ್ಲಿ ಆಶ್ರಯ ಪಡೆದಿದ್ದರು.
ಬಂಕರ್ನಲ್ಲಿ ಉಸಿರಾಟಕ್ಕೆ ತೊಂದರೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಯುವಕರು ಬಂಕರ್ನಿಂದ ಹೊರಬಂದು ರೈಲ್ವೇ ನಿಲ್ದಾಣದ ಕಡೆಗೆ ನಡೆದು ಹೊರಟಿದ್ದಾರೆ.
ಸೋಮವಾರ ಸಂಜೆಯಿಂದ ಇದುವರೆಗೆ ಸಂಪರ್ಕಕ್ಕೆ ತಮ್ಮ ಮಗ ಬಂದಿಲ್ಲ. ಏನಾದರೂ ಮಾಡಿ ಪ್ರಾಣ ಉಳಿಸಿಕೊಂಡು ಬಂದರೆ ಸಾಕು ಎಂದು ಬೇಡುತ್ತಿರುವ ವಿದ್ಯಾರ್ಥಿಯ ತಂದೆ, ತಾಯಿ ದೇವರ ಮೇಲೆ ಭಾರ ಹಾಕಿ ಕಾಯುತ್ತಿದ್ದಾರೆ.