February 21, 2026

Newsnap Kannada

The World at your finger tips!

BJP , Congress , MLC

ನನ್ನ ಸೋಲಿಗೆ ಸೈನಿಕ ಸಿಪಿವೈ, ಸಂತೋಷ್ ಕಾರಣ- ಹಳ್ಳಿ ಹಕ್ಕಿ

Spread the love
  • ಪಕ್ಷ ಚುನಾವಣೆಗೆ ಕೊಟ್ಟ ಹಣವನ್ನು ಇವರಿಬ್ಬರೆ ಗುಳುಂ ಮಾಡಿದರು.
  • ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ನೇರ ಆರೋಪ
  • ಮನುಷ್ಯ ನಿಗೆ ಕೆಲವೊಮ್ಮೆ ಬುದ್ದಿ ಕಂಟ್ರೋಲ್ ಇರೋಲ್ಲಾ- ಸಿಪಿವೈ

ಪಕ್ಷ ಚುನಾವಣೆಗಾಗಿ ಹಣ ನೀಡಿದರೆ ಯೋಗೇಶ್ವರ್, ಸಂತೋಷ್ ಹಣ ಕೊಡಲಿಲ್ಲ. ಅವರೇ ಗುಳಂ ಮಾಡಿದರು ಎಂಬುದು ಮಾಜಿ ಸಚಿವ ಬಿಜೆಪಿ ನಾಯಕ ಎಚ್ ವಿಶ್ವನಾಥ್ ನೇರ ವಾಗ್ದಾಳಿ ಮಾಡಿದರು.

ನಾನು ಉಪ ಚುನಾವಣೆಯಲ್ಲಿ ಸೋತಿದ್ದಲ್ಲ. ಸೋಲಿಸಿದ್ದಾರೆ. ಪಕ್ಷ ಚುನಾವಣೆಗೆ ಹಣ ಕೊಟ್ಟರೆ ಈ ಸಿ ಪಿ ಯೋಗೇಶ್ವರ್, ಎನ್ ಆರ್ ಸಂತೋಷ್ ಲಪಟಾಯಿಸಿ ನನಗೆ ಬಿಡಿಗಾಸೂ ಕೊಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ನೇರವಾಗಿ ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಹೈಕೋರ್ಟ್ ನ ತೀರ್ಪು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಗೆ ಹೋಗುವ ನಿರ್ಧಾರವನ್ನು ಪ್ರಕಟಿಸಿದರು.

ಹಳ್ಳಿ ಹಕ್ಕಿಗೆ ಟಾಂಗ್ ನೀಡಿದ ಸಿಪಿವೈ

ವಿಶ್ವನಾಥ್ ಹಿರಿಯರಿದ್ದಾರೆ ಹತಾಶೆಯಿಂದ ಮಾತನಾಡಿದ್ದಾರೆ. ಮನುಷ್ಯನಿಗೆ ಕೆಲವೊಮ್ಮೆಬುದ್ದಿ ಕಂಟ್ರೋಲ್ ಇರೋಲ್ಲಾ. ವಿಶ್ವನಾಥ್ ಗೆ ಈಗ ಹಾಗಾಗಿದೆ. ಹೈಕೋರ್ಟ್ ನಿಂದ ವ್ಯತಿರಿಕ್ತವಾಗಿ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್ ವರೆಗೂ ನಾವು ಮತ್ತು ಪಕ್ಷ ಅವರ ಜೊತೆಗೆ ಇರುತ್ತದೆ ಎಂದು ರಾಮನಗರ ದಲ್ಲಿ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

error: Content is protected !!