ಏ. 27 ರ ನಂತರ ಕೊರೊನಾ 4 ನೇ ಅಲೆ ನಿಯಂತ್ರಣದ ಮಾರ್ಗದರ್ಶಿ ಸೂತ್ರ ಬಿಡುಗಡೆ – ಸಿಎಂ

Team Newsnap
1 Min Read

ಕೋವಿಡ್ 4 ನೇ ಅಲೆ ನಿಯಂತ್ರಿಸುವ ಕ್ರಮಗಳ ಮಾರ್ಗದರ್ಶಿ ಸೂತ್ರಗಳನ್ನು ಏ.27 ರ ನಂತರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಕೊರೋನಾ 4 ನೇ ಅಲೆ ಅಬ್ಬರ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿಗಳು ಏ. 27 ರಂದು ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ . ನಂತರ ರಾಜ್ಯದಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ಸಿದ್ದಪಡಿಸಲಾಗುವುದು ಎಂದರು.

ನಮಗೆ ಈಗಾಗಲೇ ಕಳೆದ ಮೂರು ಕೊರೊನಾ ಅಲೆಗಳಿಂದ ಆಗಿರುವ ಸಮಸ್ಯೆ , ಪರಿಹಾರದ ದಾರಿಗಳನ್ನು ಕಂಡುಕೊಳ್ಳುವ ಬಗ್ಗೆ ನಮಗೆ ಅನುಭವ ಇದೆ. ಅಲ್ಲದೆ 4 ನೇ ಅಲೆಯ ಸ್ವರೂಪದ ಬಗ್ಗೆ ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಹೇಳಿದರು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ಪ್ರಧಾನಿ ಸಭೆಯ ನಂತರ ಅವರು ನೀಡುವ ಸೂಚನೆಗಳನ್ನು ತೆಗೆದುಕೊಂಡು ಹೊಸ ಮಾರ್ಗದರ್ಶಿ ಸೂತ್ರಗಳನ್ನು ತಯಾರಿಸಲಾಗುವುದು ಎಂದರು.

Share This Article
Leave a comment