January 30, 2026

Newsnap Kannada

The World at your finger tips!

WhatsApp Image 2024 01 04 at 2.15.31 PM

ಗೋದ್ರಾ ಘಟನೆ ಮರು ಸಾಧ್ಯತೆ ಎಂದಬಿ ಕೆ ಹರಿಪ್ರಸಾದ್ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ದೂರು

Spread the love

ಮಂಡ್ಯ

ದೇಶದಲ್ಲಿ ಮತ್ತೊಂದು ಗೋದ್ರಾ ಹಾಗೂ ಪುಲ್ವಾಮಾ ಮಾದರಿ ದಾಳಿ ಮರುಕಳಿಸಬಹುದು ಎಂದು ಹೇಳಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ವಿಚಾರಣೆ ನಡೆಸಬೇಕು ಎಂದು ಮಂಡ್ಯ ಭಾರತೀಯ ಜನತಾ ಪಾರ್ಟಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಆಪ್ತರಾಗಿರುವ ಬಿ.ಕೆ.ಹರಿಪ್ರಸಾದ್ ಅಯೋಧ್ಯೆಯಲ್ಲಿ ಶ್ರೀ ರಾಮಮೂರ್ತಿ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಜನತೆ ಇರುವಾಗ ದೇಶದ ಬೆಚ್ಚಿಬಿಳಿಸುವ ಹೇಳಿಕೆ ನೀಡಿರುವುದು ಅಘಾತಕಾರಿಯಾಗಿದೆ ಎಂದು ಬಿಜೆಪಿ ಹೇಳಿದೆ.

ದೇಶದ ಎಲ್ಲೆಲ್ಲಿ ಸಭೆಗಳು ನಡೆದಿವೆ, ಇದರಲ್ಲಿ ಕಾಂಗ್ರೆಸ್ ಪಕ್ಷದ ಪಿತೂರಿ ಇದೆಯಾ ಎಂಬ ಬಗ್ಗೆ ಅನುಮಾನವಿದೆ ಆ ಹಿನ್ನೆಲೆಯಲ್ಲಿ ಹರಿಪ್ರಸಾದ್ ಹೇಳಿಕೆ ಬಗ್ಗೆ ಅವರೆ ಹೇಳಿಕೊಂಡಿರುವಂತೆ ಮಾಹಿತಿ ಇರಬಹುದು, ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ವಿಚಾರಣೆ ಮಾಡಿದರೆ ಮುಂದಾಗುವ ಅನಾಹುತದ ಬಗ್ಗೆ ಮಾಹಿತಿ ಸಿಗಬಹುದು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್,ಎಸ್ ಶಿವಕುಮಾರ್ ಆರಾಧ್ಯ,ಪ್ರಸನ್ನ ಕುಮಾರ್, ಆನಂದ್,ಹೊಸಹಳ್ಳಿ ಶಿವು, ಎಚ್ ಕೆ ಮಂಜುನಾಥ್ ದೂರು ನೀಡಿದ್ದಾರೆ.

error: Content is protected !!