ರಾಜರತ್ನ ಪುನೀತ್​ ಗೆ ಹಾಲು – ತುಪ್ಪ ಕಾರ್ಯ ನೆರವೇರಿಸಿದ ದೊಡ್ಮನೆ ಕುಟುಂಬಸ್ಥರು

Team Newsnap
1 Min Read

ರಾಜರತ್ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ನಿಧನರಾಗಿ ಇಂದಿಗೆ ಐದು ದಿನಗಳಾದ ಹಿನ್ನೆಲೆಯಲ್ಲಿ ಮಂಗಳವಾರಅಪ್ಪು ಕುಟುಂಬಸ್ಥರು ಭಾರದ ಮನಸ್ಸಿನಿಂದ ಪುನೀತ್​ ಸಮಾಧಿ ಬಳಿ ಹಾಲು ತುಪ್ಪ ಕಾರ್ಯವನ್ನು ನೆರವೇರಿಸಿದರು.

ಕಂಠೀರವ ಸ್ಟುಡಿಯೋದಲ್ಲಿ
ಪುನೀತ್​ ಅವರ ಮಾವ ಗೋವಿಂದ್​ ರಾಜು ಮುಂದಾಳತ್ವದಲ್ಲಿ ಹಾಲು ತುಪ್ಪ ಕಾರ್ಯ ನಡೆಸಲಾಗಿದೆ.

ಈ ಕಾರ್ಯಕ್ಕೆ ಕೇವಲ ದೊಡಮ್ಮನೆ ಸದಸ್ಯರು ಹಾಗೂ ಚಿತ್ರರಂಗದ ಕೆಲ ಗಣ್ಯರಿಗೆ ಮಾತ್ರ ಆವಕಾಶ ಕಲ್ಪಿಸಲಾಗಿತ್ತು.

ಇನ್ನು ಪುನೀತ್ ಕುಟುಂಬ ಸೇರಿದಂತೆ ಪತ್ನಿ ಆಶ್ವಿನಿ ಹಾಗೂ ಅವರ ಮಕ್ಕಳು ಪುನೀತ್​ ಸಮಾಧಿಗೆ ಹಾಲು ತುಪ್ಪವನ್ನು ಬಿಟ್ಟಿದ್ದಾರೆ. ದೊಡ್ಮೆನೆ ಕುಟುಂಬದೊಂದಿಗೆ ವಿಜಯ್​ ರಾಘವೇಂದ್ರ, ಶ್ರೀ ಮುರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಲು ಪುನೀತ್​ ನಿವಾಸದಿಂದ ಮೂರು ಬಸ್​​ಗಳಲ್ಲಿ ಆಪ್ತರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು. ಹಾಲು-ತುಪ್ಪ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪುನೀತ್ ಸಮಾಧಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು.

Share This Article
Leave a comment