ಇಂತು ಬರಿದಾಗಿಸಿದರೆ ವಸುಧೆ
ಒಡಲು
ನಾಳೆಗೇನಿದೆ ಹೇಳು ನೀ ಬಾಳಿ
ಬದುಕಲು
ಬಾಳ್ವೆಯ ಹಕ್ಕಿದೆ ಸಕಲ ಜೀವ
ರಾಶಿಗೆ
ಮರಗಿಡ ಪ್ರಾಣಿಗಳೇ ಮುಕುಟ
ಪ್ರಕೃತಿಗೆ
ನೀನಿದ ಮರೆಯುವುದು ತರವೇ
ಮರುಳ
ಸ್ವಾರ್ಥ ಸರಿಸಿ ಪರಿಸರವ ಪೊರೆ
ದುರುಳ
ನಳನಳಿಪ ಹಸಿರಿನಲಿ ನಿನ್ನುಸಿರು
ಅಡಗಿದೆ
ಹಸಿರ ನಾಶ ವಿನಾಶಕೆ ಹಾದಿಯ
ತೋರಿದೆ
ಅನ್ನ ನೀರು ಗಾಳಿ ಬೆಳಕೀಯುವ
ಪರಿಸರವು
ಹೆತ್ತಬ್ಬೆಗೂ ಮಿಗಿಲು ಇದು ಪರಮ
ಸತ್ಯವು
ಅನ್ನವಿತ್ತ ಒಡಲ ಅರಿದೆಯಾದರೆ
ನೀನು
ಕ್ಷಮಿಸನು ನಮ್ಮನು ಕಾಯುವ ಆ
ದೇವನು
ನಿನ್ನ ಸಂತತಿಗೆ ಕೂಡಿಟ್ಟರೆ ಸಾಲದು
ಸಂಪತ್ತನ್ನು
ಬಾಳಿ ಬದುಕಲು ನೀನುಳಿಸಬೇಕು
ಹಸಿರು ಹೊನ್ನು
ನೀನಗಿದ್ದರೆ ನಾ ನಿನಗೆ ಎಂಬುದನು
ಅರಿತು
ಮುಂದೆ ಸಾಗುವ ಪ್ರಕೃತಿಯೊಂದಿಗೆ
ಕಲೆತು
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ