ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

Team Newsnap
1 Min Read
NEET-PG 2021 - Counseling for 1,456 seats only: Supreme

ಇತ್ತೀಚಿನ ದಿನಗಳಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ‘ಅತ್ಯಂತ ದುರುಪಯೋಗಪಡಿಸಿಕೊಂಡ ಹಕ್ಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಬ್ಲೀಘಿ ಜಮಾತ್ ಸಭೆಯ ಮೇಲೆ ಒಂದು ವಿಭಾಗದ ಮಾಧ್ಯಮಗಳು ಕೋಮು ದ್ವೇಷವನ್ನು ಹರಡುತ್ತಿವೆ ಎಂದು ಆರೋಪಿಸಿ ಜಮಿಯತ್ ಉಲಾಮಾ ಐ ಹಿಂದ್ ಮತ್ತು ಇತರರ ಮನವಿಯನ್ನು ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಕೇಂದ್ರವು ತನ್ನನ್ನು ತಪ್ಪಿಸಿಕೊಳ್ಳಲು ಅಫಿಡವಿಟ್ ಸಲ್ಲಿಸಿದೆ ಎಂದು ಸುಪ್ರೀಂ ಕಿಡಿ ಕಾರಿದೆ.

ಜಮಾತ್ ಪರ ಹಾಜರಾದ ಹಿರಿಯ ವಕೀಲ ದುಶ್ಯಂತ್ ಡೇವ್ ಅರ್ಜಿದಾರರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಗು ತೂರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರವು ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ. ಇದಕ್ಕೆ ನ್ಯಾಯಪೀಠ, “ಅವರು ತಮ್ಮ ಅಫಿಡವಿಟ್ ನಲ್ಲಿ ಯಾವುದೇ ವಾದ ಮಾಡಲು ಸ್ವತಂತ್ರರು, ನಿಮಗೆ ಬೇಕಾದ ಯಾವುದೇ ವಾದವನ್ನು ಮಾಡಲು ನೀವು ಸ್ವತಂತ್ರರು” ಎಂದು ಹೇಳಿತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯ ಬದಲು ಹೆಚ್ಚುವರಿ ಕಾರ್ಯದರ್ಶಿಯೊಬ್ಬರು ತಬ್ಲಿಘಿ ಜಮಾಅತ್ ಸಂಚಿಕೆಯಲ್ಲಿ ಮಾಧ್ಯಮ ವರದಿ ಮಾಡುವಿಕೆಗೆ ಸಂಬಂಧಿಸಿದಂತೆ ‘ಅನಗತ್ಯ’ ಮತ್ತು ‘ಅಸಂಬದ್ಧ’ ಆರೋಪಗಳನ್ನು ಒಳಗೊಂಡಿರುವ ಅಫಿಡವಿಟ್ ಸಲ್ಲಿಸಿದ್ದಾರೆ ಎಂಬ ಅಂಶದ ಬಗ್ಗೆ ನ್ಯಾಯಪೀಠ ಕೆರಳಿತು.

ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ, ಈ ಪ್ರಕರಣದಲ್ಲಿ ನೀವು ಹೇಗೆ ವರ್ತಿಸುತ್ತಿದ ರೀತಿಯಲ್ಲಿ ಇದನ್ನು ನೀವು ಕೋರ್ಟ್ ನಲ್ಲಿ ಮಾಡಲಿಕ್ಕೆ ಆಗುವುದಿಲ್ಲ ‘ಎಂದು ನ್ಯಾಯಪೀಠ ಹೇಳಿದೆ.ಅಂತಹ ಪ್ರಕರಣಗಳಲ್ಲಿ ಪ್ರೇರಿತ ಮಾಧ್ಯಮ ವರದಿ ಮಾಡುವುದನ್ನು ನಿಲ್ಲಿಸಲು ಈ ಹಿಂದೆ ಕೈಗೊಂಡ ಕ್ರಮಗಳ ವಿವರಗಳೊಂದಿಗೆ ಸುಪ್ರೀಂ ಕೋರ್ಟ್ ಐ ಮತ್ತು ಬಿ ಕಾರ್ಯದರ್ಶಿಯಿಂದ ಅಫಿಡವಿಟ್ ಕೋರಿತು.

Share This Article
Leave a comment