200 ಮಂದಿ ಗಣ್ಯರು… ಅವರಲ್ಲಿ ಮಂಡ್ಯ ಸಂಸದೆ ಸುಮಲತಾ ಒಬ್ಬರು!

Team Newsnap
1 Min Read

ದೆಹಲಿಯಲ್ಲಿಂದು ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಪಾಲ್ಗೊಂಡಿದ್ದರು.
ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡ ಸಂಸದೆ,‌ ಪ್ರಜಾಪ್ರಭುತ್ವ ಪವಿತ್ರ ಭವನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವೇ ಒಂದು ಭಾಗ್ಯ ಎಂದಿದ್ದಾರೆ.

sumalatha1

ಅನೇಕ ಸಂಸದರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಂಡ್ಯ ಸಂಸದೆ ಸುಮಲತಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

2022ರ ವೇಳೆಗೆ ಹೊಸ ಸಂಸತ್‌ ಕಟ್ಟಡ ನಿರ್ಮಾಣಗೊಳ್ಳುವ ನಿರೀಕ್ಷೆಯಿದೆ. ಭವನದ ನಿರ್ಮಾಣದಲ್ಲಿ ಸುಮಾರು 2,000 ಕಾರ್ಮಿಕರು 861.90 ಕೋಟಿ ವೆಚ್ಚ ತಗುಲಲಿದೆ.

ಕಾರ್ಯಕ್ರಮದಲ್ಲಿ 200 ಅತಿಥಿಗಳು ಪಾಲ್ಗೊಂಡಿದ್ದರು. ಸುಮಲತಾ ಕೂಡ
ಆ 200 ಜನರಲ್ಲಿ ಒಬ್ಬರಾಗಿ ಮಂಡ್ಯ ಪ್ರತಿನಿಧಿಸಿದ್ದರು ಎಂಬುದೇ ಹೆಮ್ಮೆ.

ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ

ಮಾಜಿ ಪ್ರಧಾನಿ ದೇವೇಗೌಡರಿಗೆ ಕೇಂದ್ರ ಸರ್ಕಾರವು ಕಾರ್ಯಕ್ರಮಕ್ಕೆ ಅಧೀಕೃತ ಆಹ್ವಾನ
ನೀಡಿದ್ದರೂ, ಆರೋಗ್ಯದ ಏರುಪೇರು ಗಳಿಂದ ದೆಹಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.

Share This Article
Leave a comment