ಶ್ರೀರಂಗಪಟ್ಟಣದಲ್ಲಿ ದುರಂತ : ರೈಲಿಗೆ ಸಿಲುಕಿ ಕುರಿಗಾಯಿ, ಕುರಿಗಳು ಸಾವು

Team Newsnap
0 Min Read

ರೈಲಿಗೆ ಸಿಲುಕಿ ಕುರಿಗಾಯಿ ಮತ್ತು ಕುರಿಗಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಜರುಗಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಸ್​ ಎಕ್ಸ್​ಪ್ರೆಸ್​ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ರೈಲು ಆಗಮಿಸುವ ವೇಳೆ ರೈಲ್ವೆ ಹಳಿ ಬಳಿ ಮೇಯುತ್ತಿದ್ದ ಕುರಿಗಳು ರೈಲು ಹತ್ತಿರ ಬಂದ ತಕ್ಷಣ ಗಾಬರಿಯಾಗಿ ರೈಲ್ವೆ ಹಳಿಗೆ ಬಂದಿವೆ. ಕುರಿಗಾಯಿ ಕುರಿಗಳನ್ನು ಓಡಿಸಲು ರೈಲ್ವೆ ಹಳಿ ಬಳಿ ಬಂದಿದ್ದಾನೆ. ಈ ವೇಳೆ ರೈಲಿಗೆ ಸಿಲುಕಿ ಕುರಿಗಾಹಿ ಹಾಗೂ ಕುರಿಗಳು ಮೃತಪಟ್ಟಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a comment