Trending

ಐಪಿಎಲ್ 20-20; ಸೆಮಿಫೈನಲ್ಸ್‌ಗೆ ಆಯ್ಕೆಯಾದ ಎಸ್‌ಆರ್‌ಹೆಚ್

ಐಪಿಎಲ್ 20-20ಯ ಮೊದಲನೆ ಎಲಿಮಿನೇಟರ್ ಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ ಗೆಲುವು ದಾಖಲಿಸಿತು.

ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್‌ಆರ್‌ಹೆಚ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಆರ್‌ಸಿಬಿ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಸ್ಕ್ರೀಸ್‌ಗಿಳಿದರು. ಇವರಿಬ್ಬರ ಜೋಡಿಯಾಟ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಕೊಹ್ಲಿ 7 ಎಸೆತಗಳಿಗೆ 6 ರನ್ ಗಳಿಸಿದರೆ, ಪಡಿಕ್ಕಲ್ 6 ಎಸೆತಗಳಿಗೆ 1 ರನ್ ಮಾತ್ರ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ನಂತರ ಬಂದ ಎಬಿ ಡೀ ವಿಲಿಯರ್ಸ್ 43 ಎಸೆತಗಳಿಗೆ 56 ರನ್ ಹಾಗೂ ಫಿಂಚ್ 30 ಎಸೆತಗಳಿಗೆ 32 ರನ್ ಗಳಿಸಿ ತಂಡದ ಮೊತ್ತ ಪೇರಿಸುವಲ್ಲಿ‌ ಸರ್ವಪ್ರಯತ್ನ ಮಾಡಿದರೂ ತಂಡ ಗೆಲ್ಲಲಿಲ್ಲ. ಆರ್‌ಸಿಬಿ ತಂಡ‌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್‌ಗಳನ್ನು ಮಾತ್ರ ಗಳಿಕೆ ಮಾಡಿತು.

ಆರ್‌ಸಿಬಿ ತಂಡದ‌ ಪ್ರತಿ ತಂಡವಾದ ಎಸ್‌ಆರ್‌ಹೆಚ್ ತಂಡದಿಂದ ಡಿ. ವಾರ್ನರ್ ಹಾಗೂ ಎಸ್. ಗೋಸ್ವಾಮಿ ಮೈದಾನಕ್ಕಿಳಿದು ಅತ್ಯಂತ ಸಾಧಾರಣ ಆಟ ಪ್ರಾರಂಭ ಮಾಡಿದರು. ವಾರ್ನರ್ 17 ಎಸೆತಗಳಿಗೆ 17 ರನ್ ಗಳಿಸಿದರೆ, ಗೋಸ್ವಾಮಿ ಶೂನ್ಯಕ್ಕೆ ಪೆವಿಲಿಯನ್ ದಾರಿ‌ ಹಿಡಿದರು. ನಂತರ ಬಂದ ಮನೀಶ್ ಪಾಂಡೆ ಹಾಗೂ ಕೆ. ವಿಲಿಯಮ್ಸನ್ ತಙಡದ ಮೊತ್ತ ‌ಪೇರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪಾಂಡೆ 21 ಎಸೆತಗಳಿಗೆ 24 ರನ್ ಗಳಿಸಿಸರೆ, ವಿಲಿಯಮ್ಸನ್ 44 ಎಸೆತಗಳಿಗೆ 50 ರನ್ ಗಳಿಸಿದರು‌. ಎಸ್‌ಆರ್‌ಹೆಚ್ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಕಿರೀಟವನ್ನು ತನ್ನದಾಗಿಸಿಕೊಂಡಿತು.

Team Newsnap
Leave a Comment
Share
Published by
Team Newsnap
Tags: RCB

Recent Posts

5 ವಿದ್ಯಾರ್ಥಿಗಳ ಕಾವೇರಿ ನದಿಯಲ್ಲಿ ಮುಳುಗಿ ದುರ್ಮರಣ

ರಾಮನಗರ : ಮೇಕೆದಾಟು (Mekedatu) ಬಳಿಯ ಸಂಗಮದ ಕಾವೇರಿ ನದಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ… Read More

April 29, 2024

ಎಸ್.ಎಂ ಕೃಷ್ಣ ಆರೋಗ್ಯದಲ್ಲಿ ಏರುಪೇರು; ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ (91) ಆರೋಗ್ಯದಲ್ಲಿ ಏರುಪೇರು ಆಗಿದೆ. ವೈದ್ಯರ ಸೂಚನೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಎಸ್.ಎಂ… Read More

April 29, 2024

ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಅಮಾನತ್ತು – ಎಚ್ ಡಿಕೆ

ಬೆಂಗಳೂರು: ಮಹಿಳೆಯರ ಮೇಲಿನ ಸತತ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ನಿಂದ ಅಮಾನತು ಮಾಡಲಾಗಿದೆ. ಈ… Read More

April 29, 2024

ನಾಳೆ ಶ್ರೀನಿವಾಸ ಪ್ರಸಾದ್ ಅವರ ಅಂತಿಮ ಸಂಸ್ಕಾರ

ಮೈಸೂರು : ಶ್ರೀನಿವಾಸ್‌ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ನಾಳೆ ಮಾಡಲಾಗುತ್ತದೆ ಎಂದು ‌ ಮಗಳು ಪ್ರತಿಮಾ ಪ್ರಸಾದ್‌… Read More

April 29, 2024

ಭ್ರೂಣ ಲಿಂಗ ಪತ್ತೆ ಪ್ರಕರಣ – ಮೈಸೂರಿನಲ್ಲಿ 17 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

ಮೈಸೂರು : ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ… Read More

April 29, 2024

ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್​ (76) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಮೂತ್ರಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು… Read More

April 29, 2024