ಭೂಪಾಲ್ ಶಾಸಕನ ಪುತ್ರ ಗುಂಡು ಹಾರಿಸಿಕೊಂಡು ಅತ್ಮಹತ್ಯೆ

Team Newsnap
0 Min Read

ಭೂಪಾಲ್ ನ ಕಾಂಗ್ರೆಸ್ ಎಂಎಲ್‍ಎ ಮಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ

ವೈಭವ್(16) ಎಂಬ ಬಾಲಕನೇ ರಿವಾಲ್ವರ್​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಕಾಂಗ್ರೆಸ್ ಎಂಎಲ್‍ಎ ಸಂಜಯ್ ಯಾದವ್ ಮಗ. ಪಿಯುಸಿ ಓದುತ್ತಿದ್ದನು.

ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡಿದ್ದ ವೈಭವ್‍ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಕೆಲವೇ ಕ್ಷಣಗಳಲ್ಲಿ ವೈಭವ್ ಕೊನೆಯ ಕೊನೆಯುಸಿರೆಳೆದಿದ್ದಾನೆ.

ಆತ ವಾಷ್‍ರೂಮ್‍ನಲ್ಲಿ ಶೂಟ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿದ್ದಾನೆ.

Share This Article
Leave a comment