ಸಿದ್ದು ವಿರುದ್ಧ ಸೋಮಣ್ಣ, ಬಂಡೆ ವಿರುದ್ಧ ಸಾಮ್ರಾಟ್

Team Newsnap
1 Min Read

ಮೈಸೂರು: ವಿ.ಸೋಮಣ್ಣ ಅವರಿಗೆ ವರುಣ ಮತ್ತು ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಇಳಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಆಗಿ ಚಾಮರಾಜನಗರ ಟಿಕೆಟ್ ಸಹ ನೀಡಲಾಗಿದೆ. ಕನಕಪುರದಲ್ಲಿ ಡಿಕೆಶಿ ವಿರುದ್ಧ ಆರ್. ಅಶೋಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಪದ್ಮನಾಭ ನಗರದಿಂದ ಸಹ ನೀಡಲಾಗಿದೆ. ಚಾಮುಂಡೇಶ್ವರಿಯಿಂದ ಕಾಂಗ್ರೆಸ್ ನಾಯಕ ವಾಸು ಪುತ್ರ ಕವೀಶ್ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ : 189 ಅಭ್ಯರ್ಥಿಗಳ ಪಟ್ಟಿ ರಿಲೀಸ್ – 35 ಕ್ಷೇತ್ರಗಳು ಬಾಕಿ – ಪಟ್ಟಿ ವಿವರ ಹೀಗಿದೆ

ashok and dks

ಮೈಸೂರು ಜಿಲ್ಲಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ಚಾಮುಂಡೇಶ್ವರಿ- ಕವೀಶ್ ಗೌಡ
  • ಚಾಮರಾಜ – ನಾಗೇಂದ್ರ
  • ವರುಣಾ – ಸೋಮಣ್ಣ
  • ಟಿ. ನರಸೀಪುರ – ಡಾ. ರೇವಣ್ಣ
  • ಪಿರಿಯಾಪಟ್ಟಣ – ಸಿ. ಹೆಚ್. ವಿಜಯಶಂಕರ್
  • ಕೆಆರ್ ನಗರ – ವೆಂಕಟೇಶ್ ಹೊಸಹಳ್ಳಿ
  • ನರಸಿಂಹರಾಜ – ಸಂದೇಶ್ ಸ್ವಾಮಿ
  • ನಂಜನಗೂಡು – ಹರ್ಷವರ್ಧನ್
  • ಹುಣಸೂರು – ದೇವರಹಳ್ಳಿ ಸೋಮಶೇಖರ್

ಮಂಡ್ಯ ಜಿಲ್ಲಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ಮಂಡ್ಯ – ಅಶೋಕ್ ಜಯರಾಂ
  • ಕೆ ಆರ್ ಪೇಟೆ – ಕೆಸಿ ನಾರಾಯಣಗೌಡ
  • ನಾಗಮಂಗಲ – ಸುಧಾ ಶಿವರಾಮೇಗೌಡ
  • ಮದ್ದೂರು – ಎಸ್ ಪಿ ಸ್ವಾಮಿ
  • ಶ್ರೀರಂಗಪಟ್ಟಣ – ಸಚ್ಚಿದಾನಂದ
  • ಮೇಲುಕೋಟೆ – ಡಾ ಇಂದ್ರೆಶ್ ಕುಮಾರ್
  • ಮಳವಳ್ಳಿ – ಮುನಿರಾಜ್
ashok jayaram mandya bjp
ಅಶೋಕ್ ಜಯರಾಂ

ವಿಜಯೇಂದ್ರ ಶಿಕಾರಿ

politics
ವಿಜಯೇಂದ್ರ

ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಶಿಕಾರಿಪುರ ಟಿಕೆಟ್ ನೀಡಲಾಗಿದೆ. ಮಗನನ್ನು ಕ್ಷೇತ್ರದ ಉತ್ತರಾಧಿಕಾರಿ ಎಂದು ಯಡಿಯೂರಪ್ಪ ಘೋಷಿಸಿದ್ದರು. ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಈ ಮೂಲಕ ಮಣೆ ಹಾಕಿದೆ.

Share This Article
Leave a comment