ಸೋನಿಯಾ, ರಾಹುಲ್ ಗಾಂಧಿ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿದ ಡಿಕೆಎಸ್ , ಸಿದ್ದು

Team Newsnap
0 Min Read

ಚಾಮರಾಜನಗರದಲ್ಲಿ ಭಾನುವಾರ ಮೇಕೆದಾಟು ಪಾದಯಾತ್ರೆ ಕುರಿತಂತೆ ಕಾಂಗ್ರೆಸ್ ನಾಯಕರುಗಳು ಪೂರ್ವಭಾವಿ ಸಭೆ ನಡೆಸಿದರು.

ಸಭೆಗೂ ಮುನ್ನ ಚಾಮರಾಜೇಶ್ವರ ದೇಗುಲಕ್ಕೆ ಇಬ್ಬರು ನಾಯಕರು ಆಗಮಿಸಿ, ಚಾಮರಾಜೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಮಯದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹೆಸರಲ್ಲೂ ಪೂಜೆ ಮಾಡುವಂತೆ ಡಿಕೆ ಶಿವಕುಮಾರ್ ಕೇಳಿಕೊಂಡರು.

ಮೇಕೆದಾಟು ಯೋಜನೆ’ಗೆ ಆಗ್ರಹಿಸಿ ‘ಪಾದಯಾತ್ರೆ’ ಮಾಡುವ ತಯಾರಿಯಲ್ಲಿರುವ ಕಾಂಗ್ರೆಸ್​ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಂದು ಮೈಸೂರು ಭಾಗದಲ್ಲಿ ಒಟ್ಟಾಗಿ ಕಾಣಿಸಿಕೊಂಡರು.

ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧ್ರುವನಾರಾಯಣ್, ಶಾಸಕ ಪುಟ್ಟರಂಗಶೆಟ್ಟಿ, ಮಹಿಳಾ ಘಟಕದ ಪುಷ್ಪ ಅಮರ್‌ನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a comment