February 23, 2026

Newsnap Kannada

The World at your finger tips!

balaram

ಮೈಮುಲ್ ಚುನಾವಣೆಯ ಸೋಲು ಸಹಿಸದ ಸಿದ್ದರಾಮಯ್ಯ ಆಪ್ತ ಆತ್ಮಹತ್ಯೆ

Spread the love

ಮೈಮುಲ್‌ ಚುನಾವಣಾ ಸೋಲಿನಿಂದ ಮನನೊಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೊಬ್ಬರು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಜರುಗಿದೆ.

ಕೆ.ಸಿ.ಬಲರಾಮ್ ಎಂಬವರೇ ಆತ್ಮಹತ್ಯೆ ‌ಮಾಡಿಕೊಂಡವರು. ಕಳೆದ ಮೂರು ದಶಕಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ, ಬಲರಾಮ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ಇತ್ತೀಚೆಗೆ ನಡೆದ ಮೈಮುಲ್‌ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದ ಬಲರಾಮ್ ಸೋಲನ್ನು‌ ಕಂಡಿದ್ದರು‌. ಇದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೆ.ಸಿ.ಬಲರಾಮ್‌ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

error: Content is protected !!