ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ `ರಥಯಾತ್ರೆ’ ಪ್ರಾರಂಭ?

Team Newsnap
1 Min Read

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ( Election) ಭರ್ಜರಿ ಸಿದ್ಧತೆಯನ್ನು ಮತ್ತೆ ಮುಂದುವರೆಸಿದ್ದಾರೆ.

ಸಿದ್ದರಾಮೋತ್ಸವ ಯಶಸ್ಸಿನ ಬಳಿಕ ಇದೀಗ ರಥಯಾತ್ರೆಯನ್ನು ಹಮ್ಮಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.ಇದನ್ನು ಓದಿ –ನಟಿ ಶ್ರೀಲೀಲಾ ತಾಯಿ ವಿರುದ್ದ ಪತಿ ಸುಧಾಕರ್ ದೂರು : ಮತ್ತೊಂದು ಸಂಕಷ್ಟ

ಸಿದ್ದರಾಮಯ್ಯ ( Siddaramaiah ) ಅವರು ರಥಯಾತ್ರೆಗೆ ಮಾಡಿರುವ ಪ್ಲ್ಯಾನ್ ನಲ್ಲಿ ವಿಶೇಷ ವಾಹನವೂ ತಯಾರಾಗುತ್ತಿದೆ. ರಾಹುಲ್ ಗಾಂಧಿ ( Rahul Gandi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ( Bharath Jodo ) ಯಾತ್ರೆ ರಾಜ್ಯದಿಂದ ತೆರಳಿದ ಬಳಿಕ ರಾಜ್ಯಾದ್ಯಂತ ರಥಯಾತ್ರೆ ಆರಂಭಗೊಳ್ಳಲಿದೆ.

ರಥಯಾತ್ರೆ( Ratha yatre) ಮೂಲಕ ಸಿದ್ದರಾಮಯ್ಯ ಅವರು ರಾಜ್ಯದ 224 ವಿಧಾನಸಭಾ ( Vidhana Sabha) ಕ್ಷೇತ್ರಗಳ ಸಂಚಾರ ಮಾಡಿ ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ( Congress ) ಪರ ಅಲೆ ಸೃಷ್ಠಿಸಲು ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a comment