ಕಲಾವತಿ ಪ್ರಕಾಶ್
ಬೆಂಗಳೂರು
ಚನ್ನಕೃಷ್ಣಪ್ಪ ನಾಯಕ ೧೧ನೆ ಶತಮಾನದಲ್ಲಿ ಸ್ಥಾಪಿಸಿದ
ಸಿಂಹಾಸನಪುರದ ಸಂಕ್ಷಿಪ್ತ ರೂಪ ಹಾಸನ ಹೆಸರಾಗಿದೆ
ಹಾಸನಾಂಬೆ ದೇವಿಯ ಹೆಸರು ಎಂಬ ಪ್ರತೀತಿ ಇದೆ
ಇದು ವೀರ ಅರ್ಜುನನ ಮೊಮ್ಮಗನಿಗೆ ಸಂಬಂಧಿಸಿದೆ
ಹೊಯ್ಸಳ ಮೌರ್ಯ ಗಂಗ ಚಾಲುಕ್ಯ ರಾಷ್ಟರಕೂಟರು
ಚೋಳರು ವಿಜಯನಗರ ಮೈಸೂರರಸರು ಆಳಿದರು
ಹಾಸನ ಜಿಲ್ಲೆ ಹೊಯ್ಸಳ ವಾಸ್ತು ಶಿಲ್ಪಕೆಗಳ ನಾಡಾಗಿದೆ
ಮಲೆನಾಡ ಹೆಬ್ಬಾಗಿಲು ಬಡವರ ಊಟಿಯೆ ಇದಾಗಿದೆ
ಹಾಸನದೆಲ್ಲೆಡೆ ೮೦೦ ಕ್ಕೂ ಹೆಚ್ಚು ಶಾಸನ ದೊರೆತಿವೆ
ಮರಾಠಿ ಕನ್ನಡ ಸಂಸ್ಕೃತ ತಮಿಳು ಮಾರವಾಡಿ
ಮಹಾಜನಿಯಂತಹ ಭಾಷೆಗಳಲ್ಲಿದ್ದು ಕರ್ನಾಟಕದ
ಇತಿಹಾಸ ತಿಳಿಯಲು ಬಹಳ ಸಹಕಾರಿಯಾಗಿವೆ
ಹಾಸನ ಅರಸೀಕೆರೆ ಅರಕಲಗೂಡು ಬೇಲೂರು
ಚನ್ನರಾಯಪಟ್ಟಣ ಹೊಳೇನರಸೀಪುರ ಸಕಲೇಶಪುರ
ಶಾಂತಿಗ್ರಾಮ ಕೋಣನೂರು ಆಲೂರು ತಾಲ್ಲೂಕುಗಳು
ಕಾಫಿ ಮೆಣಸು ಆಲೂಗಡ್ಡೆ ಭತ್ತ ಕಬ್ಬು ಇಲ್ಲಿನ ಬೆಳೆಗಳು
ಆಲೂರಿನ ವಾಟೆಹೊಳೆ ಬೇಲೂರಿನ ಯಗಚಿ
ಗೊರೂರು ಅಣೆಕಟ್ಟು ಇಲ್ಲಿನ ಜಲಾಶಯಗಳು
ಹಾಸನದ ಹವಾಗುಣ ಬೆಚ್ಚನೆಯ ಮುಂಜಾನೆ
ತಂಪಾದ ಕೊರೆಯುವ ಚಳಿಯ ಸಂಜೆಗಳು
ಬೇಲೂರು ಹಳೇಬೀಡು ಶ್ರವಣಬೆಳಗೊಳ ಜೈನಮಠ
ಪಾರ್ವತಮ್ಮ ಬೆಟ್ಟ ಹುಲಿಕೆರೆ ಕೊಳ ಬಿಸಿಲೆಘಾಟ್
ಈಶ್ವರ ದೇವಸ್ಥಾನ ಲಕ್ಷ್ಮಿದೇವಿ ಗುಡಿ ಕೇದಾರೇಶ್ವರ
ಶೆಟ್ಟಿಹಳ್ಳಿ ಚರ್ಚ್ ಗಳು ಪ್ರಸಿದ್ಧ ಪ್ರವಾಸಿ ತಾಣಗಳು
ಬೇಲೂರ ಚನ್ನಕೇಶವ ಹಳೆಬೀಡ ಹೊಯ್ಸಳೇಶ್ವರ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪ ಕಲೆ ಹೊಯ್ಸಳ ವಾಸ್ತಶಿಲ್ಪದ ಬೀಡು ಬಳಪದ ಕಲ್ಲಿನದು
ಪ್ರಪಂಚದಲ್ಲೇ ಪ್ರಸಿದ್ಧ ಕಲೆಯ ಕೆತ್ತನೆ ಇಲ್ಲಿಹುದು
ಷಟ್ಪದಿ ಬ್ರಹ್ಮ ರಾಘವಾಂಕ ರಗಳೆಯ ಕವಿ ಹರಿಹರ
ನೇಮಿಚಂದ್ರರು ಬೆಲೂರ ಕೇಶವದಾಸರು ಹಾಗೂ
ಜಾನಪದ ಜಂಗಮ ಎಸ್ ಕೆ ಕರೀಂಖಾನ್ ಕವಿಗಳು
ಕುಮಾರ ಗಂದರ್ವ ಎಸ್ ವಿ ರಂಗಣ್ಣ ಶಾಂತರಸರು
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು