ಮಂಡ್ಯ ರೈತರಿಗೆ ಶಾಕ್ – ಹಾಲಿನ ಖರೀದಿ ದರದಲ್ಲಿ ಲೀಟರ್‌ಗೆ 1 ರು ಕಡಿತ

Team Newsnap
1 Min Read

ಮಂಡ್ಯ:ರೈತರ ಖರೀದಿ ಹಾಲಿನ ದರದಲ್ಲಿ ಲೀಟರಿಗೆ 1 ರು ಕಡಿತ ಮಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್ ) ಆದೇಶ ಹೊರಡಿಸಿದೆ ಇದು ಮಂಡ್ಯ ರೈತರಿಗೆ ಬಿಗ್ ಶಾಕ್ ನೀಡಿದಂತಾಗಿದೆ

ಜೂನ್ ತಿಂಗಳಲ್ಲೇ ಮನ್ಮುಲ್ ಪರಿಷ್ಕೃತ ದರ ಆದೇಶ ಜಾರಿ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರೆಯಲಿದೆ.

ಮನ್ಮುಲ್ ಪ್ರತೀ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡುತ್ತಿತ್ತು. ಇದೀಗ ಖರೀದಿ ಹಾಲಿನ ದರದಲ್ಲಿ ಲೀಟರ್‌ಗೆ 1 ರು ಕಡಿತಗೊಳಿಸಿ ರೈತರಿಗೆ ಶಾಕ್ ನೀಡಿದೆ.

ಮುಂಗಾರು ಮಳೆಯಾಗಿ ಹಸಿರು ಮೇವು ಲಭ್ಯತೆಗೆ ದರ ಕಡಿತಗೊಳಿಸಲಾಗಿದೆ ಎಂದು ಮನ್ಮುಲ್ ಸಮರ್ಥನೆ ನೀಡಿದೆ.ಮಂಡ್ಯ : ಜಿಲ್ಲೆಯ ಕೊನೆ ಭಾಗದ ಬೆಳೆಗಳಿಗೆ ನೀರು ಹರಿಸಿ – ಕೃಷಿ ಸಚಿವ ಸಿ ಆರ್ ಎಸ್

ಸದ್ಯ ಹಾಲು ಉತ್ಪಾದಕರಿಗೆ 32.25 ರೂ. ಬದಲು 31.25 ರೂ. ಕೊಡುವುದಾಗಿ ಮನ್ ಮುಲ್ ಹೇಳಿದೆ.

Share This Article
Leave a comment