ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದಿನ ಉಕ್ರೇನ್ ಭೀಕರ ಪರಿಸ್ಥಿತಿಯನ್ನು ತಿಳಿಗೊಳಿಸಲು ಶಿವನಿಂದ ಮಾತ್ರ ಸಾಧ್ಯ . ನಮ್ಮ ಪರವಾಗಿ ಎಲ್ಲಾ ಭಾರತೀಯರು ಪ್ರಾರ್ಥನೆ ಮಾಡಿ ಎಂದು ದೆಹಲಿಯಲ್ಲಿರುವ ಉಕ್ರೇನ್ ರಾಯಭಾರಿ ಇಗೋರ್ ಪೋಲಿಖಾ ಮನವಿ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಇಗೋರ್ ಪೋಲಿಖಾ, ಇಂದು ಮಹಾ ಶಿವರಾತ್ರಿ ಅನಿಸುತ್ತೆ. ರಷ್ಯಾದಿಂದ ಉಕ್ರೇನ್ನನ್ನು ಕಾಪಾಡಲು ಶಿವನಿಂದ ಮಾತ್ರ ಸಾಧ್ಯ. ಎಲ್ಲಾ ಭಾರತೀಯರು ಉಕ್ರೇನ್ಗಾಗಿ ಶಿವನ ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿದರು.
ಉಕ್ರೇನ್ ರಾಯಭಾರಿ ಇಗೋರ್ ಪೋಲಿಖಾ ಈ ಮುನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ಜತೆ ಮಾತಾಡುವಂತೆ ಮನವಿ ಮಾಡಿದ್ದರು.
ಈ ಬೆನ್ನಲ್ಲೇ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಫೋನ್ ಮಾಡಿ ಯುದ್ಧ ನಿಲ್ಲಿಸಿ, ಶಾಂತಿಯುತ ಮಾತುಕತೆ ನಡೆಸಿ ಎಂದು ಸಲಹೆ ನೀಡಿದ್ದರು.