ಬೆಂಗಳೂರಿನಲ್ಲಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಭೀಕರ ಹತ್ಯೆ

Team Newsnap
1 Min Read
  • ಗಣಿ ಮತ್ತು ಭೂ ವಿಜ್ನಾನ ಇಲಾಖೆ ಉಪನಿರ್ದೇಶಕಿಯ ಹತ್ಯೆ

  • ಅಪಾರ್ಟ್ ಮೆಂರ್ಟ್ ನಲ್ಲಿ ಒಬ್ಬರೆ ವಾಸವಿದ್ದ ಸರ್ಕಾರಿ ಮಹಿಳಾ ಆಧಿಕಾರಿ

  • ಪ್ರೀ ಪ್ಲಾನ್ ಮಾಡಿ ಮಹಿಳಾ ಸರ್ಕಾರಿ ಅಧಿಕಾರಿಯನ್ನು ಕೊಲೆ ಮಾಡಿರುವ ಶಂಕೆ


ಬೆಂಗಳೂರು: ಚಾಕು ಇರಿದು ಸರ್ಕಾರಿ ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ದೊಡ್ಡ್ ಕಲ್ಲ ಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಪೂರ್ಣಿಮಾ (37) ಹತ್ಯೆಯಾದ ಅಧಿಕಾರಿ. ಪೂರ್ಣಿಮಾ ಶಿವಮೊಗ್ಗದ ತಿರ್ಥಹಳ್ಳಿ ಮೂಲದವರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿಯಾಗಿದ್ದರು. ಪತಿಯಿಂದ ವಿಚ್ಛೇದನ ಪಡೆದು ಅಪಾರ್ಟ್ ಮೆಂರ್ಟ್ ನಲ್ಲಿ ಒಬ್ಬರೆ ವಾಸವಿದ್ದ ಪೂರ್ಣಿಮಾ ಅವರನ್ನು ನಿನ್ನೆ ರಾತ್ರಿ 8.30 ಕ್ಕೆ ಕತ್ತಿಗೆ ಇರಿದು ಕೊಲೆ ಮಾಡಲಾಗಿದೆ .

ಮನೆಯಲ್ಲಿ ಒಬ್ಬರೇ ವಾಸ ಮಾಡ್ತಿದ್ದರು. ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ರಾತ್ರಿ ಕಚೇರಿಯಿಂದ 8 ಗಂಟೆಗೆ ಮನೆಗೆ ಬಂದಿದ್ದರು. ಕಾರು ಡ್ರೈವರ್ ಅವರನ್ನು ಮನೆ ಬಳಿ ಬಿಟ್ಟು ಹೋಗಿದ್ದಾನೆ.

ರಾತ್ರಿಯೇ ಅಣ್ಣ ಕರೆ ಮಾಡಿದಾಗ ಪ್ರತಿಮಾ ಕರೆ ಸ್ವೀಕರಿಸಿಲ್ಲ. ಬೆಳಿಗ್ಗೆ ಮನೆ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ. ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ.ಹೀಗಾಗಿ ಇದೊಂದು ಉದ್ದೇಶಪೂರ್ವಕ ಕೊಲೆ ನಡೆದಿದೆ ಎಂಬ ಅನುಮಾನ ಮನೆಯವರಲ್ಲಿ ಹುಟ್ಟಿಕೊಂಡಿದೆ.ಕರುನಾಡ ಜಿಲ್ಲೆಗಳ ಕಿರು ಪರಿಚಯ – 5 -ಬಾಗಲಕೋಟೆ

ಸುಬ್ರಮಣ್ಯಪುರ ಪೊಲೀಸ್ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Share This Article
Leave a comment