ಎಸ್ಟಿ/ಎಸ್ಸಿ ಸಮುದಾಯದ ಮೀಸಲಾತಿ ಹೆಚ್ಚಳ ವಿಚಾರವಾಗಿ ನಾಗಮೊಹನ್ ದಾಸ್ ವರದಿ ಅನುಷ್ಠಾನಕ್ಕೆ ತರುತ್ತೇವೆ.
ನಾಳೆಯೇ ಸಂಪುಟ ಸಭೆ ಕರೆದು ಮೀಸಲಾತಿ ಕುರಿತು ಅಂತಿಮ ಮುದ್ರೆ ಒತ್ತುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದರು.ಇದನ್ನು ಓದಿ –ದೆಹಲಿ ಅಬಕಾರಿ ಹಗರಣ – ದೆಹಲಿ, ಆಂಧ್ರ, ಪಂಜಾಬ್ ನ 35 ಕಡೆ ಇಡಿ ದಾಳಿ
ಎಸ್ಟಿ/ಎಸ್ಸಿ ಸಮುದಾಯದ ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ವ ಪಕ್ಷದ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಮಗ್ರ ಮೀಸಲಾತಿ ಜಾರಿ ಕುರಿತಂತೆಯೂ ಚರ್ಚೆ ಮಾಡಿದ್ದೇವೆ.
ಅಲ್ಲದೇ ಎಸ್ಟಿ/ಎಸ್ಸಿ ಸಮುದಾಯ ಒಳಗಿರುವ ಕೆಲ ಸಮುದಾಯಗಳಿಗೂ ನ್ಯಾಯ ಸಿಕ್ಕಿಲ್ಲ ಎಂಬ ಬಗ್ಗೆಯೂ ಚರ್ಚೆ ಮಾಡಿ ಎಲ್ಲರ ವಿಶ್ವಾಸ ಮೇರೆಗೆ ತೀರ್ಮಾನ ಕೈಗೊಳ್ಳುತ್ತೇವೆ.
ಎಲ್ಲಾಪಕ್ಷಗಳು, ಕಾನೂನು ತಜ್ಞರೊಂದಿಗೆ ಚರ್ಚೆ ಮಾಡುತ್ತೇವೆ. ಎಸ್ ಟಿ ಸಮುದಾಯದ ಮೀಸಲಾತಿಯನ್ನು 3 ರಿಂದ 7ಕ್ಕೆ ಹಾಗೂ ಎಸ್ಸಿ ಮೀಸಲಾತಿಯನ್ನು 15 ರಿಂದ 17 ಹೆಚ್ಚಿಸುವಂತೆ ಬಗ್ಗೆ ಚರ್ಚೆ ಆಗಿದೆ.
ಆದರೆ ಈಗ ಇರೋ ಯಾವುದೇ ಮೀಸಲಾತಿಯನ್ನು ಸಮುದಾಯಗಳಿಗೆ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಇದನ್ನೇ ನಾಗಮೋಹನ್ ದಾಸ್ ಸಮಿತಿಯೂ ವರದಿ ನೀಡಿದೆ ಎಂದು ತಿಳಿಸಿದರು.
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ