SC/ST ಮೀಸಲಾತಿ ಹೆಚ್ಚಳ: ನಾಳೆಯೇ ಅಂತಿಮ ಮುದ್ರೆ- ಸಿಎಂ ಬೊಮ್ಮಾಯಿ

Team Newsnap
1 Min Read
SC/ST reservation hike: Final seal tomorrow- CM Bommai SC/ST ಮೀಸಲಾತಿ ಹೆಚ್ಚಳ: ನಾಳೆಯೇ ಅಂತಿಮ ಮುದ್ರೆ- ಸಿಎಂ ಬೊಮ್ಮಾಯಿ

ಎಸ್​​ಟಿ/ಎಸ್​​ಸಿ ಸಮುದಾಯದ ಮೀಸಲಾತಿ ಹೆಚ್ಚಳ ವಿಚಾರವಾಗಿ ನಾಗಮೊಹನ್ ದಾಸ್ ವರದಿ ಅನುಷ್ಠಾನಕ್ಕೆ ತರುತ್ತೇವೆ.

ನಾಳೆಯೇ ಸಂಪುಟ ಸಭೆ ಕರೆದು ಮೀಸಲಾತಿ ಕುರಿತು ಅಂತಿಮ ಮುದ್ರೆ ಒತ್ತುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದರು.ಇದನ್ನು ಓದಿ –ದೆಹಲಿ ಅಬಕಾರಿ ಹಗರಣ – ದೆಹಲಿ, ಆಂಧ್ರ, ಪಂಜಾಬ್‌ ನ 35 ಕಡೆ ಇಡಿ ದಾಳಿ

ಎಸ್​​ಟಿ/ಎಸ್​​ಸಿ ಸಮುದಾಯದ ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ವ ಪಕ್ಷದ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಮಗ್ರ ಮೀಸಲಾತಿ ಜಾರಿ ಕುರಿತಂತೆಯೂ ಚರ್ಚೆ ಮಾಡಿದ್ದೇವೆ.

ಅಲ್ಲದೇ ಎಸ್​​ಟಿ/ಎಸ್​ಸಿ ಸಮುದಾಯ ಒಳಗಿರುವ ಕೆಲ ಸಮುದಾಯಗಳಿಗೂ ನ್ಯಾಯ ಸಿಕ್ಕಿಲ್ಲ ಎಂಬ ಬಗ್ಗೆಯೂ ಚರ್ಚೆ ಮಾಡಿ ಎಲ್ಲರ ವಿಶ್ವಾಸ ಮೇರೆಗೆ ತೀರ್ಮಾನ ಕೈಗೊಳ್ಳುತ್ತೇವೆ.

ಎಲ್ಲಾಪಕ್ಷಗಳು, ಕಾನೂನು ತಜ್ಞರೊಂದಿಗೆ ಚರ್ಚೆ ಮಾಡುತ್ತೇವೆ. ಎಸ್ ಟಿ ಸಮುದಾಯದ ಮೀಸಲಾತಿಯನ್ನು 3 ರಿಂದ 7ಕ್ಕೆ ಹಾಗೂ ಎಸ್​​ಸಿ ಮೀಸಲಾತಿಯನ್ನು 15 ರಿಂದ 17 ಹೆಚ್ಚಿಸುವಂತೆ ಬಗ್ಗೆ ಚರ್ಚೆ ಆಗಿದೆ.

ಆದರೆ ಈಗ ಇರೋ ಯಾವುದೇ ಮೀಸಲಾತಿಯನ್ನು ಸಮುದಾಯಗಳಿಗೆ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಇದನ್ನೇ ನಾಗಮೋಹನ್ ದಾಸ್ ಸಮಿತಿಯೂ ವರದಿ ನೀಡಿದೆ ಎಂದು ತಿಳಿಸಿದರು.

Share This Article
Leave a comment