ಸಂಕ್ರಾಂತಿ

Team Newsnap
1 Min Read

ಸಾವಿರ ಕಷ್ಟಗಳ
ಬದಿಗೊತ್ತಿ
ಬಡ ರೈತನ ಮೊಗದಲ್ಲಿನ ನಗು
ಅದುವೇ ಸಂಕ್ರಾಂತಿ //

ಧರೆ ತನ್ನೊಡಲ
ಬಸಿರೋತ್ತು
ಜೀವಗಳ ಒಡಲ ತುಂಬಿದೊಡೆ
ಅದುವೇ ಸಂಕ್ರಾಂತಿ //

ಬಳಲಿ ಬೆಂಡಾದ
ಬಸವನಿಗೆ ಚಿತ್ತಾರ
ಸಿಂಗರಿಸಿ ಕಿಚ್ಚು ಹಾಯಿಸಿದರೆ
ಅದುವೇ ಸಂಕ್ರಾಂತಿ //

ಪಿತೃ ಪೂರ್ವಜರ
ಆತ್ಮ ಶಾಂತಿಗಾಗಿ
ಗಂಗೆ ಭೋರ್ಗರೆದರೆ ಮುಕ್ತಿಸಲು
ಅದುವೇ ಸಂಕ್ರಾಂತಿ //

ಲೋಕ ಕಲ್ಯಾಣಾರ್ಥವಾಗಿ
ಸತಿ ಪತಿಗಳಾದ
ಶಿವ ಪಾರ್ವತಿಯರ ಮಿಲನ
ಅದುವೇ ಸಂಕ್ರಾಂತಿ //

ಜಗದ ಇಚ್ಚ್ಜಾಮರಣಿ
ಪುಣ್ಯ ಕಾಲವ ತಪಿಸಿ
ಮಕರ ಬೆಳಕಲಿ ಜೀವ ಬಿಟ್ಟಾಗ
ಅದುವೇ ಸಂಕ್ರಾಂತಿ //

ashwini angadi badami
ಅಶ್ವಿನಿ ಅಂಗಡಿ ಬದಾಮಿ

ದಕ್ಷಿಣಾಯದಿಮುಚ್ಚಿದ
ಸ್ವರ್ಗದ ಬಾಗಿಲು
ಉತ್ತರಾಯಣ ಕಾಲದಿ ತೆರೆದಾಗ
ಅದುವೇ ಸಂಕ್ರಾಂತಿ //

ಭರತದ ತುಂಬೆಲ್ಲಾ
ಬಿಹು,ಪೊಂಗಲ್, ವಿಷು
ಉತ್ತರ ಪುಣ್ಯ ಕಾಲವೆಂದು
ಸಂಭ್ರಮಿಸುವುದೇ ಸಂಕ್ರಾಂತಿ //

ಧರೆಯ ಬೆಳಕಿಸುವ
ಮಕರದಿ ಹಾಯ್ದು ಹಸಿರು ನೀಡುವ
ಸೂರ್ಯನಿಗೆ ಕೋಟಿ ಪ್ರಣಾಮಗಳ
ಅರ್ಪಿಸುವುದೇ ಸಂಕ್ರಾಂತಿ….//

Share This Article
Leave a comment