January 30, 2026

Newsnap Kannada

The World at your finger tips!

fake , honey , trap

ಕೋಲಾರದಲ್ಲಿ ಜಗಳ ಬಿಡಿಸಲು ಹೋದ RSS ಮುಖಂಡನಿಗೆ ಚಾಕು ಇರಿತ

Spread the love

ಬೈಕ್ ಗೆ ಮತ್ತೊಂದು ವಾಹನ ಟಚ್ ಆದ ಕಾರಣ, ಜಗಳ ನಿರತರಾಗಿದ್ದ ವೇಳೆಯಲ್ಲಿ ಮಧ್ಯಪ್ರವೇಶಿಸಿ ಜಗಳ ಬಿಡಿಸೋದಕ್ಕೆ ಹೋದಂತ ಆರ್ ಎಸ್ ಎಸ್ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರಿನ ಮಾರಿಕಾಂಬ ರಸ್ತೆಯಲ್ಲಿ ಬೈಕ್ ಗೆ ಮತ್ತೊಂದು ಗಾಡಿ ಟಚ್ ಆದ ಪರಿಣಾಮ, ಇಬ್ಬರು ಜಗಳದಲ್ಲಿ ನಿರತರಾಗಿದ್ದರು.ಇದನ್ನು ಓದಿ –ಮಾಧ್ಯಮಗಳಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ:ಪ್ರೊ ಸಿ ಎನ್ ಆರ್

ಈ ವೇಳೆ ಮಧ್ಯಪ್ರವೇಶಿಸಿ ಮಾಲೂರಿನ ಆರ್ ಎಸ್ ಎಸ್ ಮುಖಂಡ ರವಿ ಎಂಬುವರು, ಜಗಳ ಬಿಡಿಸೋದಕ್ಕೆ ಮುಂದಾಗಿದ್ದರು.

ಈ ವೇಳೆಯಲ್ಲಿ ರವಿ ಅವರಿಗೆ ಕ್ಷಲ್ಲಕ ಕಾರಣಕ್ಕಾಗಿ ಇಬ್ಬರು ವ್ಯಕ್ತಿಗಳಿಂದ ಚಾಕುವಿನಿಂದ ಇರಿಯಲಾಗಿದೆ. ಇದರಿಂದಾಗಿ ಆರ್ ಎಸ್ ಎಸ್ ಮುಖಂಡ ರವಿ ಅವರ ಮುಖಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಆರ್ ಎಸ್ ಎಸ್ ಕಾರ್ಯಕರ್ತರು, ಮಾಲೂರು ಬಸ್ ನಿಲ್ದಾಣದ ಎದುರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!