ಮೈಸೂರು :ಮನೆ ಬಾಗಿಲು ಮೀಟಿದ ಖದೀಮರು 1.30 ಲಕ್ಷ ನಗದು,ಒಂದು ಮೊಬೈಲ್ ಹಾಗೂ ಬೆಳ್ಳಿತಟ್ಟೆ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ವಿಜಯನಗರದ 4 ನೇ ಹಂತದಲ್ಲಿ ನಡೆದಿದೆ.
ಗ್ಯಾಸ್ ಸಿಲಿಂಡರ್ ಡೀಲರ್ ಆಗಿರುವ ಯಶವಂತ್ ಎಂಬುವರಿಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದೆ.
ಯಶವಂತ್ ರವರು ಬೆಂಗಳೂರಿಗೆ ತೆರಳಿದ್ದ ವೇಳೆ ಖದೀಮರು ಬಾಗಿಲು ಮೀಟಿ 1.30 ಲಕ್ಷ ನಗದು,5 ಸಾವಿರ ಮೌಲ್ಯದ ಮೊಬೈಲ್,5 ಸಾವಿರ ಮೌಲ್ಯದ ಬೆಳ್ಳಿ ತಟ್ಟೆ ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು