ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ IPS ಹುದ್ದೆಗೆ ಏರಿದ್ದ ಆರೋಪದ ದೂರಿನ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿ ಕೆಂಪಯ್ಯ ಇಂದು ವಿಚಾರಣೆಗೆ ಹಾಜರಾಗುವಂತೆ ಡಿಸಿಆರ್ ಇ ನೋಟಿಸ್ ನೀಡಿದೆ.
ಇದು ಒಂದು ದಶಕದ ಹಿಂದಿನ ದೂರು. ಈ ಸಂಬಂಧದ ಫೈಲ್ ಕಳೆದು ಹೋಗಿದ್ದರಿಂದ ಪ್ರಕರಣ ತನಿಖೆ ನಿಂತು ಹೋಗಿತ್ತು. ಈಗ ಫೈಲ್ ಸಿಕ್ಕಿದ್ದರಿಂದ ವಿಚಾರಣೆ ಆರಂಭವಾಗಿದೆ.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ( ಡಿಸಿಅರ್ ಇ) ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ತಾವು ಕುರುಬ ಸಮಾಜಕ್ಕೆ ಸೇರಿದರೂ ಕಾಡು ಎಂಬ ಜಾತಿ ಪ್ರಮಣ ಪತ್ರ ನೀಡಿ ಪರಿಶಿಷ್ಠ ಪಂಗಡದ ಸೌಲಭ್ಯ ಪಡೆದು IPS ಹುದ್ದೆಗೆ ಏರಿದ್ದೀರಿ ಎಂಬ ಆರೋಪದ ದೂರಿನ ವಿಚಾರಣೆ ನಡೆಸಲು ಕೆಂಪಯ್ಯನಿಗೆ ಬುಲಾವ್ ನೀಡಲಾಗಿದೆ.
ದಶಕದ ಹಿಂದಿನ ದೂರಿಗೆ ಈಗ ಮತ್ತೆ ಜೀವ ಬಂದಿರುವ ಹಿನ್ನೆಲೆಯಲ್ಲಿ ಕೆಂಪಯ್ಯನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.