ಕಾಸು ಕೊಟ್ಟರೆ ಸರ್ಕಾರಿ ಹುದ್ದೆ : ಮೈಸೂರಿನ ಆರ್ ಸೌಮ್ಯ ಬಂಧನ – ಅಕ್ರಮದಲ್ಲಿ ಭಾಗಿ ?

Team Newsnap
1 Min Read

ರಾಜ್ಯ ಸರ್ಕಾರಿ ಹುದ್ದೆಗಳ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. 30 ರಿಂದ 40 ಲಕ್ಷ ಕೊಟ್ಟರೆ ಸಾಕು ನಿಮಗೂ ಸರ್ಕಾರಿ ಹುದ್ದೆ ಸಿಗುತ್ತದೆ

ಮೈಸೂರಿನಲ್ಲಿ ಬಂಧಿತ ಆರ್ ಸೌಮ್ಯಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸೌಮ್ಯ ಮೊಬೈಲ್‍ನಲ್ಲಿ 18 ಪ್ರಶ್ನೆಗಳು ಇದ್ದವು. ಜಿಲ್ಲಾ ಖಜಾನೆಯಿಂದಲೇ ಪೇಪರ್ ಲೀಕ್ ಶಂಕೆ ವ್ಯಕ್ತವಾಗಿದೆ. ಬಂಡಲ್ ಓಪನ್ ಮಾಡಿ ಪ್ರಶ್ನೆಪತ್ರಿಕೆ ಪಡೆದಿರುವ ಅನುಮಾನ ಎದ್ದಿದೆ.

ಬಂಧಿತ ಸೌಮ್ಯಳಿಂದ ಇನ್ನಿತರರಿಗೂ ರವಾನೆಯಾಗಿರುವ ಅನುಮಾನ ಇದೆ. ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಸೌಮ್ಯಳನ್ನ ಪೊಲೀಸ್ ವಶಕ್ಕೆ ಕೇಳಲಿದ್ದಾರೆ.

ಎಸಿಪಿ ನೇತೃತ್ವದ ಟೀಂ ನಿಂದ ವಿಚಾರಣೆ ಸಾಧ್ಯತೆ ಇದೆ. ಪಿಹೆಚ್ ಡಿ ವಿದ್ಯಾರ್ಥಿನಿ ಆಗಿದ್ದ ಸೌಮ್ಯಳಿಗೆ ಪ್ರಶ್ನೆ ಪತ್ರಿಕೆ ಹೇಗೆ ಸಿಕ್ಕಿದೆ. ಸೌಮ್ಯಳಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗೋದಿಕ್ಕೆ ಕಾರಣ ಯಾರು..?, ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಅಡಗಿದೆಯಾ ದೊಡ್ಡವರ ಕೈವಾಡ ಇದೆಅ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ

 ಕಳೆದ ಮಾರ್ಚ್‍ನಲ್ಲಿ ನಡೆದಿದ್ದ 1,242 ಹುದ್ದೆಯಲ್ಲೂ ಹಗರಣದ ಅಕ್ರಮದ ವಾಸನೆ ಬರುತ್ತಿದೆ. ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆಯಲ್ಲೂ ಗೋಲ್ಮಾಲ್ ನಡೆದಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

Share This Article
Leave a comment