ಡೆಹ್ರಾಡೂನ್ : ಉತ್ತರಕಾಶಿಯ ದೇಶದ ಅತೀ ದೊಡ್ಡ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.
17 ದಿನಗಳಿಂದ ಹೊರಗಿನ ಗಾಳಿ-ಬೆಳಕು ಕಾಣದೇ ಬಸವಳಿದಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.
ಅಮೆರಿಕ ತಂತ್ರಜ್ಞಾನದ ಯಂತ್ರಗಳೇ ಆಗದು ಅಂತ ಕೈ ಚೆಲ್ಲಿದಾಗ ದೇಶಿ ಸಾಂಪ್ರದಾಯಿಕ ಪದ್ದತಿಯಿಂದ ಸುರಂಗ ಕೊರೆಯಲಾಗಿದೆ. ಇದಕ್ಕೆ ಕಾರಣ ಇಲಿ ಬಿಲ ಗಣಿಗಾರಿಕೆ.
ಸ್ವದೇಶಿ ಯಂತ್ರಗಳನ್ನು ಬಳಸಿ ಕೈಯಿಂದಲೇ ಸಣ್ಣ ಸುರಂಗ ಕೊರೆದು ಱಟ್ ಹೋಲ್ ಮೈನಿಂಗ್ ಪರಿಣತರು 41 ಕಾರ್ಮಿಕರನ್ನ ತಲುಪಿದ್ದರು. ಹೀಗಾಗಿ ಕೊನೆಗೂ 41 ಮಂದಿ ಕಾರ್ಮಿಕರು ಸುರಂಗದಿಂದ ಹೊರಕ್ಕೆ ಬಂದಿದ್ದಾರೆ.ಡಿಕೆಶಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ಯತ್ನಾಳ್
ಪೈಪ್ ಮೂಲಕ ಸ್ಟ್ರೆಚರ್ನಲ್ಲಿ ಹೊರ ತರಲಾಗಿದೆ. ಒಬ್ಬೊಬ್ಬರನ್ನೇ ಎನ್ ಡಿ ಆರ್ ಎಫ್ ತಂಡ ಹೊತ್ತು ತಂದಿದೆ ಎಂದು ವರದಿಯಾಗಿದೆ.