January 14, 2026

Newsnap Kannada

The World at your finger tips!

election , ticket , BJP

I will leave my life, will not leave BJP : MLA Ramdas ಜೀವ ಬೇಕಾದ್ರೆ ಬಿಡುತ್ತೇನೆ, ‌ಬಿಜೆಪಿ ಪಕ್ಷ ಬಿಡೋಲ್ಲಾ : ಶಾಸಕ ರಾಮದಾಸ್‌

ಸಿಎಂಗೆ ಲಕೋಟೆ ನೀಡಿದ ರಾಮದಾಸ್

Spread the love

ತಮಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ತೀವ್ರ ಅತೃಪ್ತರಾಗಿರುವ ಮೈಸೂರು ಕೆ.ಆರ್. ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್, ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ತಾವು ಹಿಂದೆ ಹೇಳಿದಂತೆ ಮುಚ್ಚಿದ್ದ ಲಕೋಟೆಯನ್ನು ನೀಡಿದ್ದಾರೆ.


ಕಳೆದ ಸೋಮವಾರ ಸಿಎಂ ಮೈಸೂರಿಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ರಾಮದಾಸ್ ಬಂದಿರಲಿಲ್ಲ ಹಾಗೂ ಅವರ ಯಾವುದೇ ಕಾರ್ಯಕ್ರಮಗಳಲ್ಲೂ ಭಾಗವಹಿಸಿರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ, ತಾವು ಯಾವುದೇ ವಿಷಯವನ್ನು ಬಹಿರಂಗವಾಗಿ ಹೇಳುವುದಿಲ್ಲ. ತಮ್ಮ ಅನಿಸಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಮುಖ್ಯಮಂತ್ರಿಗೆ ನೀಡುವುದಾಗಿ ಅಂದುಪ್ರತಿಕ್ರಿಯಿಸಿದ್ದರು.


ಇಂದು ಲಕೋಟೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲವು ವಿಷಯ ಚರ್ಚಿಸಲಾಗಿದೆ. ಸಮಯ ದೊರೆತಾಗ ಲಕೋಟೆಯಲ್ಲಿರುವ ಪತ್ರ ಓದಿ ಎಂದು ಮುಖ್ಯಮಂತ್ರಿಗೆ ಹೇಳಿದ್ದಾಗಿ ಶಾಸಕರು ತಿಳಿಸಿದರು. ಇತ್ತ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರೂ ಆರ್.ಟಿ.ನಗರದಲ್ಲಿರುವ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

error: Content is protected !!