Trending

ರಾಜಸ್ಥಾನ ರಾಯಲ್ಸ್ ಗೆ ಮುಖಭಂಗ ಡೆಲ್ಲಿ ಕ್ಯಾಪಿಟಲ್ ಗೆ ಅದ್ಭುತ ಗೆಲುವು

ಐಪಿಎಲ್ 20-20ಯ 23 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 46 ರನ್‌ಗಳ ವಿಜಯ ಸಾಧಿಸಿತು.

ದುಬೈನ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದು ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡಿಸಿ ತಂಡದ ಆರಂಭಿಕ ಆಟಗಾರರಾಗಿ ಫೀಲ್ಡ‌್‌ಗೆ ಎಂಟ್ರಿ ಕೊಟ್ಟ ಪೃಥ್ಷಿ ಶಾ ಹಾಗೂ ಶಿಖರ್ ಧವನ್ ಅವರ ಆಟ ನೀರಸವಾಗಿತ್ತು. ಧವನ್ ಹಾಗೂ ಶಾ ಕ್ರಮವಾಗಿ ಕೇವಲ 5 ಹಾಗೂ 19 ರನ್ ಗಳಿಗೆ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ತಂಡದ ನಾಯಕ‌ ಐಯ್ಯರ್ ಸಹ 22 ರನ್‌ಗಳ ಸಾಧಾರಣ ಗಳಿಕೆ ಮಾಡಿ ಔಟಾದರು. ತಂಡವು ಗೆಲ್ಲಲು ಹೋರಾಡಿದ್ದು ಎಂ. ಸ್ಟೊಯಿನಿಸ್ ಹಾಗೂ ಎಸ್. ಹೆಟ್ಮಿಯರ್. ಸ್ಟೊಯಿನಿಸ್ 30 ಎಸೆತಗಳಲ್ಲಿ 39 ರನ್ ಮತ್ತು ಹೆಟ್ಮಿಯರ್ 24 ಎಸೆತಗಳಲ್ಲಿ 45 ರನ್ ಗಳಿಸಿ ತಂಡ ಗೆಲ್ಲುವಲ್ಲಿ ಸಹಾಯಕರಾದರು. ಡಿಸಿ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

source – Instagram
credits – iplt20

ಪ್ರತಿಯಾಟವನ್ನು ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡ ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನವನ್ನು ನೀಡಲು ವಿಫಲವಾಯ್ತು. ಆರ‌ಆರ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೆ. ಬಟ್ಲರ್‌ ಅವರ ಆಟ ಆಕರ್ಷಕವಾಗಿರಲಿಲ್ಲ. ಕೇವಲ 13 ರನ್‌ಗಳಿಗೆ ಬಟ್ಲರ್ ಔಟಾದರು. ಜೈಸ್ವಾಲ್ 36 ರನ್‌ಗಳ ಸಾಮಾನ್ಯ ಮೊತ್ತವನ್ನು ತಂಡಕ್ಕೆ ನೀಡಿದರು. ರಾಹುಲ್ ತೇವಾಟಿಯಾ (29 ಎಸೆತಗಳಿಗೆ 38 ರನ್) ಹಾಗೂ ಸ್ಮಿತ್ (17 ಎಸೆತಗಳಿಗೆ 24 ರನ್) ಗಳಿಸಿದರಾದರೂ ತಂಡ ಸೋಲನ್ನು ಕಾಣಲೇಬೇಕಾಯ್ತು. ಡಿಸಿ ತಂಡದ ಕೆ. ರಬಾಡ, ಸ್ಟೊಯಿನಿಸ್ ಹಾಗೂ ಆರ್. ಅಶ್ವಿನ್ ಅವರ ಬೌಲಿಂಗ್ ರಾಜಸ್ಥಾನ್ ತಂಡವನ್ನು ಕಟ್ಟಿಹಾಕಿದ್ದಂತೂ ಸುಳ್ಳಲ್ಲ. ರಾಜಸ್ಥಾನ್ ತಂಡ 19.4 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಪಂದ್ಯದಲ್ಲಿ ಪರಾಭವಗೊಂಡಿತು.

Team Newsnap
Leave a Comment

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024