ಕಳೆದ ಹದಿನಾಲ್ಕು ದಿನಗಳಿಂದ ಕೇಂದ್ರ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿದ್ದ ರಾಗಿಣಿ ಹಾಗೂ ಸಂಜನಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎನ್ಡಿಪಿಎಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಅವರನ್ನು ಸಾಮಾನ್ಯ ಸೆಲ್ಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ ಅವರಿಗೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ರಾಗಿಣಿ ಹಾಗೂ ಸಂಜನಾ ಅವರನ್ನು ನ್ಯಾಯಾಲಯಕ್ಜೆ ಹಾಜರುಪಡಿಸಲಾಗಿತ್ತು. ಆಗ ನ್ಯಾಯಾಲಯವು ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.
ನಿನ್ನೆಯಿಂದಲೇ ಸಾಮಾನ್ಯ ಸೆಲ್ಗೆ ಶಿಫ್ಟ್ ಆಗಿದ್ದಾರೆ. ಹಾಗಾಗಿ ಅವರಿಗೆ ಜೈಲೂಟವೇ ಗತಿಯಾಗಿದೆ. ಕ್ವಾರಂಟೈನ್ನಲ್ಲಿದ್ದಾಗ ಅವರಿಗೆ ಊಟ, ಬಟ್ಟೆ ಎಲ್ಲ ಪೂರೈಕೆಯಾಗುತ್ತಿತ್ತು. ಈಗ ಸಾಮಾನ್ಯ ಖೈದಿಗಳಂತೆ ಕಾಲಹಾಕಬೇಕಾಗಿದೆ.