ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿ ಸೇವೆ ಸಲ್ಲಿಸುವ ವೇಳೆ ಕೋಟ್ಯಾಂತರ ರು ಬಟ್ಟೆ ಬ್ಯಾಗ್ ಗಳನ್ನು ಖರೀದಿಸಿ, ವಿತರಣೆ ಮಾಡಿದ ಹಗರಣವನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಸರ್ಕಾರದ ಈ ನಿಧಾ೯ರದಿಂದ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ
ಅಂದಿನ DC ರೋಹಿಣಿ ವರ್ಗಾವಣೆಯಾಗಿ 11 ತಿಂಗಳು ಕಳೆದಿದ್ದರೂ ಹಗರಣ ಮಾತ್ರ ಇನ್ನೂ ಜೀವಂತವಾಗಿದೆ. ಶಾಸಕ ಸಾರಾ ಮಹೇಶ್ ಹಾಗೂ ರೋಹಿಣಿ ನಡುವಿನ ಜಟಾಪಟಿಗೆ ಈ ಹಗರಣದ ತನಿಖೆಯ ನಿಧಾ೯ರ ಹೊಸ ಟ್ವಿಸ್ಟ್ ನೀಡಲಿದೆ
ಮಾರುಕಟ್ಟೆಯಲ್ಲಿ 10 -15 ರು ಲಭ್ಯವಾಗುವ ಈ ಬಟ್ಟೆ ಬ್ಯಾಗ್ ಅನ್ನು 52 ರು ಖರೀದಿಗೆ ಮಾಡಲಾಗಿದೆ. ಕೈಮಗ್ಗ ಅಭಿವೃದ್ದಿ ನಿಗಮವನ್ನು ಬಿಟ್ಟು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ನೀಡಿ 14.71 ಲಕ್ಷ ಬ್ಯಾಗ್ ಖರೀದಿಸಿ 14 ಕೋಟಿ ಅವ್ಯವಹಾರ ಮಾಡಲಾಗಿರುವ ಬಗ್ಗೆ ಶಾಸಕ ಮಹೇಶ್ ಅಧಿವೇಶನದಲ್ಲೇ ಸರ್ಕಾರದ ಗಮನ ಸೆಳೆದು ತನಿಖೆ ಒತ್ತಾಯಮಾಡಿದ್ದರು
ಈ ಹಗರಣದ ದೂರು ಕೇಳುತ್ತಿದ್ದಂತೆ ರೋಹಿಣಿ ಅವರನ್ನು ಬೆಂಗಳೂರಿಗೆ ವಗಾ೯ವಣೆಯ ಶಿಕ್ಷೆ ನೀಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿತ್ತು. ಆದರೆ ಈ ಹಗರಣದ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿರುವುದು ರೋಹಿಣಿಗೆ ಮತ್ತೆ ಆತಂಕ ಸೃಷ್ಠಿಯಾಗುವಂತೆ ಮಾಡಿದೆ.
- ರಾಜ್ಯದ ಹವಾಮಾನ ವರದಿ (Weather Report) 22-05-2022
- ಮುಂಬೈ ಇಂಡಿಯನ್ ಗೆ ರೋಚಕ ಗೆಲುವು – RCB ಸೆಮಿಫೈನಲ್ಸ್ ಗೆ DC ತಂಡ ಟೂರ್ನಿಯಿಂದ ಹೊರಕ್ಕೆ
- ಲೀಯಾ – ಪೀಟರ್ ‘ ಬರ್ತ್ ಡೇ’ ಶಾಪಿಂಗ್ಗೆ ಹೋಗಿದ್ದ ಪ್ರೇಮಿಗಳು : ಯುವಕನಿಂದ ಮಾಹಿತಿ
- ದೇಶದ ಜನತೆಗೆ ಸಿಹಿ ಸುದ್ದಿ:ಪೆಟ್ರೋಲ್, ಗ್ಯಾಸ್, ಸಿಮೆಂಟ್, ಗೊಬ್ಬರ, ಪ್ಲಾಸ್ಟಿಕ್, ಉಕ್ಕು ದರ ಇಳಿಕೆ
- ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಇಳಿಕೆ! ಪೆಟ್ರೋಲ್ ಪ್ರತಿ ಲೀಟರ್ ಗೆ ₹ 8 ಡೀಸೆಲ್ ₹ 6 ಕಡಿತ
More Stories
ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
KRS ಒಳಹರಿವಿನ ಹೆಚ್ಚಳ; 103 ಅಡಿ ತಲುಪಿದ ಅಣೆಕಟ್ಟೆ
ಮಂಡ್ಯದಲ್ಲಿ ಬಿಜೆಪಿ ಮ್ಯಾಜಿಕ್! ಆಗುತ್ತೆ – ಒಂದು ವಾರ ಕಾಯಿರಿ :ಗೋ ಮಧುಸೂಧನ್