K L ರಾಹುಲ್ ಗೆ ಕರುಳು ಹುಣ್ಣು: ಆಸ್ಪತ್ರೆಗೆ ದಾಖಲು – ಪಂಜಾಬ್ ಗೆ ಜಮೈಕಾ ನಾಯಕ?

Team Newsnap
1 Min Read

ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಕೆ. ಎಲ್. ರಾಹುಲ್ ತೀವ್ರ ಕರುಳು ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಫ್ರ್ಯಾಂಚೈಸ್‌ನ ಅಧಿಕೃತ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದು, ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಶನಿವಾರ ರಾತ್ರಿ ಹೊಟ್ಟೆ ನೋವಿನಿಂದ ತೀವ್ರವಾಗಿ ಬಳಲಿದರು.

ಕೂಡಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಕರುಳು ಹುಣ್ಣಿನಿಂದಾಗಿ ತೀವ್ರ ಹೊಟ್ಟೆ ನೋವು ಅನುಭವಿಸಿದ್ದರು. ಈ ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

kl rahul

ಐಪಿಎಲ್ 2021 ರನ್-ಚಾರ್ಟ್‌ಗಳ ಹಾಲಿ ನಾಯಕ ರಾಹುಲ್ ಭವಿಷ್ಯ ಪಂದ್ಯ ಹೊರಗುಳಿಯುವ ಸಾಧ್ಯತೆಯಿದೆ. ಅವರ ಶಸ್ತ್ರಚಿಕಿತ್ಸೆಯ ನಂತರ ಪೂರ್ಣವಾಗಿ ಚೇತರಿಸಿಕೊಂಡ
ಮುಂದಿನ ನಿರ್ಧಾರ ಮಾಡಲಾಗುವುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಿಬಿಕೆಎಸ್ ಆಟದ ಒಂದು ಭಾಗಕ್ಕೆ ರಾಹುಲ್ ಮೈದಾನದಿಂದ ಹೊರಗುಳಿದಿದ್ದರು, ಕ್ರಿಸ್ ಗೇಲ್ ಅವರು ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದರು. ಫ್ರ್ಯಾಂಚೈಸ್ ಅಧಿಕೃತವಾಗಿ ಹೊಸ ನಾಯಕನನ್ನು ಹೆಸರಿಸಿಲ್ಲ ಆದರೆ ಜಮೈಕಾದವರು ಅಧಿಕಾರ ವಹಿಸಿಕೊಳ್ಳುವ ಸಾದ್ಯತೆ ಇದೆ.

Share This Article
Leave a comment