ನೂತನ ಕೃಷಿ ಕಾನೂನು ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಆಲ್ ಇಂಡಿಯನ್ ಕಿಸಾನ್ ಸಂಘರ್ಷ ಕೋ-ಆರ್ಡಿನೇಷನ್ ಕಮಿಟಿ ಘೋಷಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ತನ್ನ ನಿರ್ಧಾರವನ್ನು ಪ್ರಕಟಿಸಿದ ಎಐಕೆಎಸ್ಸಿಸಿ ಮುಖಂಡ ವಿಎಂ ಸಿಂಗ್ ಬೇರೆಯವರ ನಿರ್ದೇಶನಕ್ಕೆ ತಕ್ಕಂತೆ ನಾವು ಪ್ರತಿಭಟನೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ನಮಗೆ ನಿರ್ದೇಶನ ನೀಡುತ್ತಿರುವ ನಾಯಕರಿಗೆ ಶುಭ ಹಾರೈಸುತ್ತೇನೆ. ಈ ಕ್ಷಣದಿಂದ ವಿಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದೆ ಅಂತಾ ಹೇಳಿದ್ದಾರೆ.