ಖಲಿಸ್ತಾನಿ ಧ್ವಜ ಹಾರಿಸಿದವರಿಗೆ 2.5 ಕೋಟಿ ಬಹುಮಾನ -ಎಸ್ ಎಫ್ ಜೆ

Team Newsnap
1 Min Read

ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮಂಗಳವಾರ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರವನ್ನು ನಡೆಸಿದ್ದು ನಾವೇ ಎಂದು ಒಪ್ಪಿಕೊಂಡಿದೆ.

ಅಲ್ಲದೇ, ಕೆಂಪುಕೋಟೆಯ ಬಳಿ ಖಲಿಸ್ತಾನಿ ಬಾವುಟ ಹಾರಿಸಿದವರಿಗೆ 3,50,000 ಡಾಲರ್ ( ಎರಡೂವರೆ ಕೋಟಿ) ಬಹುಮಾನ ನೀಡಲಾಗುವುದು ಎಂದು ಎಸ್ ಎಫ್ ಜೆ ಸಂಘಟನೆ ಘೋಷಣೆ ಮಾಡಿದೆ.

ಸಿಖ್ ಫಾರ್ ಜಸ್ಟೀಸ್ ಸಂಘಟನೆ ಯಿಂದ ಫೆಬ್ರವರಿ 1 ರಂದು ಪಾರ್ಲಿಮೆಂಟ್​ಗೆ ಮುತ್ತಿಗೆ ಹಾಕುವಂತೆ ರೈತರಿಗೆ ಕರೆ ನೀಡಿದೆ.

ದೆಹಲಿಯಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಕಳೆದ 2 ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಪ್ರತಿಭಟನೆಯ ಅಂಗವಾಗಿ ನಿನ್ನೆ ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.

ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಉಂಟಾಗಿತ್ತು. ಅಲ್ಲದೇ ಕೆಂಪುಕೋಟೆಯ ಬಳಿ ತ್ರಿವರ್ಣ ಧ್ವಜದ ಬದಲಿಗೆ ಬೇರೊಂದು ಧ್ವಜವನ್ನು ಹಾರಿಸಲಾಯಿತು. ಅಲ್ಲದೇ ಪೊಲೀಸರಿಂದ ಮೇಲೆ ಹಲ್ಲೆಯೂ ನಡೆದಿರುವುದನ್ನು ಸ್ಮರಿಸಬಹುದು.

Share This Article
Leave a comment