ಪರಶಿವಸುತನೇ ಪಾರ್ವತಿತನಯನೇ
ತಾಯಿಯಾಣತಿಗೆ ಕಾವಲು ಕಾಯ್ದವನೇ
ತಾಯಾಣತಿಗೆ ತಂದೆಯನೇ ತಡೆದವನೇ
ಶಿವ ಶಿರ ತರಿದಾಗುದಿಸಿದ ಗಜಾನನನೇ
ಪ್ರಥಮ ಪೂಜಿತನೆ ತ್ರಿಜಗ ವಂದ್ಯನೆ
ಸಿದ್ಧಿಬುದ್ಧಿ ಕರುಣಿಸೋ ವಿನಾಯಕನೆ
ದುರಿತ ನಿವಾರಣ ಭವಭಯ ಹರಣನೆ
ವಿಘ್ನವ ತೊಲಗಿಸಿ ಪೊರೆ ವಿಘ್ನೇಶ್ವರನೆ
ಮುತ್ತಿನಾರ ಹೇಮಕಂಕಣ ಧರಿಸಿದವನೆ
ರತ್ನಕಿರೀಟ ತೊಟ್ಟ ಪಾಶಾಂಕುಶಧಾರನೇ
ಹೊಟ್ಟೆ ಬಿರಿಯೆ ತಾ ಹಾವ ಬಿಗಿದವನೇ
ನೀ ಬಾರಯ್ಯಾ ಬಾ ಮೂಷಿಕವಾಹನನೇ
ಮೋದಕ ಪ್ರಿಯನೇ ತಿಂಡಿಪೋತನೇ
ಉಂಡೆ ಚಕ್ಕುಲಿಯ ಮೆಲ್ಲುವ ಗಣಪನೆ
ಕಡುಬು ಪ್ರಿಯ ನೀನು ಲಂಬೋದರನೆ
ಪಂಚಭಕ್ಷ್ಯ ನೀಡುವೆ ಬಾ ಕರಿಮುಖನೆ
ನೀ ಮೆಚ್ಚಲು ಗರಿಕೆಗೆ ಸಿಕ್ಕಿತು ಗರಿಮೆ
ಎಕ್ಕದ ಹೂವಿಗೆ ನೀ ನೀಡಿಹೆ ಹಿರಿಮೆ
ಪಾದಪಂಕದಲಿ ಪದ್ಮಕಿಹುದು ಮಹಿಮೆ
ಬೇರೇನೂ ಬೇಡ ಸಾಕು ನಿನ್ನೊಲುಮೆ
ಅಪಹಾಸ್ಯಗೈದ ಚಂದ್ರನ ಶಿಕ್ಷಿಸಿದವನೇ
ಅಪವಾದಕೆ ಸಿಕ್ಕ ಕೃಷ್ಣನ ಬಿಡಿಸಿದವನೇ
ನಿನ್ನ ಅಭಯಹಸ್ತ ಒಂದಿರೆ ಸಾಕೆಮಗೆ
ಶಿರಬಾಗಿ ನಮಿಪೆ ಪಾದಾರವಿಂದಗಳಿಗೆ
ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More
ಐದು ದಿನಗಳ ಜೈಲು ವಾಸಕ್ಕೆ ಅಂತ್ಯ 5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More
ಬೆಂಗಳೂರು : ಪ್ರಜ್ವಲ್ ರೇವಣ್ಣ ವಿಚಾರದ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್ನಲ್ಲಿ ಸಂತ್ರಸ್ತೆ… Read More
ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More
ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More
This website uses cookies.
Leave a Comment