Karnataka

ಚಳುವಳಿ ನಿರತ ರೈತರ ಮೇಲೆ ಪೋಲಿಸ್ ದೌರ್ಜನ್ಯ: ಸರ್ಕಾರದ ವಿರುದ್ದ ಭರತ್ ರಾಜ್ ಕಿಡಿ

  • ಪೊಲೀಸ್ ಇಲಾಖೆಯ ಸಂವಿಧಾನ ಬದ್ದವಾಗಿ ಕಾರ್ಯ ನಿರ್ವಹಣೆಗೆ ಪ್ರಾಂತ ರೈತ ಸಂಘ ಒತ್ತಾಯ

ಟನ್ ಕಬ್ಬಿಗೆ 5,000 ರೂ ಲೀಟರ್ ಹಾಲಿಗೆ ಕನಿಷ್ಠ 40ರೂ ಬೆಲೆ ನಿಗದಿಪಡಿಸಬೇಕೆಂದು ಕಳೆದ 52 ದಿನಗಳಿಂದ ಹಗಲು ರಾತ್ರಿ ಹೋರಾಟ ನಡೆಸುತ್ತಿರುವ ರೈತರನ್ನು ಬಂಧಿಸಿ ಮತ್ತು ಅವರ ಟೆಂಟ್ ಅನ್ನು ಕಿತ್ತೆಸದಿರುವ ಪೊಲೀಸ್ ರ ದೌರ್ಜನ್ಯ ವನ್ನ ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ ಪೊಲೀಸ್ ಇಲಾಖೆ ಆಳುವ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡದೆ ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದರು.

ಮಳವಳ್ಳಿ ಯಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ನೀತಿಗೆಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರ ಚುನಾವಣೆಗೆ ಮುನ್ನ ದೇಶದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸದೆ ವಂಚನೆ ಮಾಡಿದೆ ಎಂದರು.

ರೈತರ ಆದಾಯ ದ್ವಿಗುಣ ಗೊಳಿಸಿ ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ತಗಲುವ ಖರ್ಚಿನ ಜೊತೆಗೆ ಶೇ.50.ರಷ್ಟು. ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸುತ್ತೇನೆ ಎಂದು ಭರವಸೆ ನೀಡಿತ್ತು ಹಾಗೂ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ .ರೈತರ ಆತ್ಮಹತ್ಯೆಯನ್ನು ತಡೆಗಟ್ಟುತ್ತುನೆಂದು ಹೇಳಿತ್ತು ಆದರೆ ರೈತ ವಿರೋಧಿ ವಿದ್ಯುತ್ ಮಸೂದೆ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ . ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದೆ ಹಾಗಾಗಿ ಬಿಜೆಪಿಯ ನಯ ವಂಚಕರನ್ನು ಜೈಲಿಗೆ ಹಾಕುವುದರ ಬದಲು ಬೆವರ ಬಸಿದು ಅನ್ನ ನೀಡುವ ರೈತರ ಮೇಲೆ ದೌರ್ಜನ್ಯ ನಡೆಸಿದ ಘಟನೆಯನ್ನು ಖಂಡಿಸಬೇಕೆಂದರು.

ಚಳುವಳಿಯ ಟೆಂಟ್ ನಲ್ಲಿ ಮಹಾತ್ಮರ ಪೋಟೋ ಗಳಿಗೆ ಅಪಮಾನ ಮಾಡಿ ಅವುಗಳನ್ನ ಬಿಸಾಡಿ ಅಗೌರವ ತೋರಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಆಗ್ರಹಿಸುತ್ತೆವೆ.

ಕಾರ್ಪೊರೇಟ್ ಕಂಪನಿ ಕುಳಗಳಾದ ಆದಾನಿ . ಅಂಬಾನಿ ಮನೆಯ ಅಡಿಯಾಳದ ಅಮಿತ್ ಶಾ ಮಂಡ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ಅವರ ಅಣತೆಯಂತೆ ರೈತ ಚಳುವಳಿಯನ್ನು ಹತ್ತಿಕ್ಕಲು ಹೊರಟಿದ್ದಾರೆ ದೆಹಲಿಯ ರೈತ ಚಳುವಳಿಯ ಮುಂದೆ ಮಂಡಿಯೂರಿದ ನರೇಂದ್ರ ಮೋದಿ. ಅಮಿತ್ ಶಾ ಬುದ್ದಿ ಕಲಿತಂತಿಲ್ಲ. ಇವರಿಗೆ ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಜನತಾದಳದವರು ಅಧಿವೇಶನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸದೆ ಅನಾಗತ್ಯ ವಿಚಾರಕ್ಕೆ ಒತ್ತು ನೀಡುತ್ತಿದ್ದಾರೆ . ಜಿಲ್ಲೆಯಲ್ಲಿ ಮತ್ತೊಂದು ಕೆಟ್ಟ ಪರಂಪರೆ ಮುಂದುವರೆದಿದೆ.
ಜನರ ಸಂಕಷ್ಟಗಳಿಗೆ ಆಳುವ ಸರ್ಕಾರಗಳ ನೀತಿಗಳು ಕಾರಣ ಎಂಬುವುದನ್ನ ಜನತೆ ಮುಂದೆ ತಿಳಿಸಿ ಅವುಗಳು ಇತ್ಯರ್ಥಕ್ಕೆ ಹೋರಾಟವೆ ದಾರಿ ಎಂಬುದನ್ನ ಮರೆಮಾಚಿಸಿ ಅಮಾಯಕ ಜನರನ್ನ ದೇವಸ್ಥಾನಗಳ ಯಾತ್ರೆಗೆ ಎಲ್ಲಾ ಪಕ್ಷದವರು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಜನರನ್ನ ದಿಕ್ಕು ತಪ್ಪಿಸಿ ಆಳುವ ಸರ್ಕಾರದ ಮೇಲೆ ಜನರಿಗೆ ಬರಬೇಕಾದ ಸಿಟ್ಟನ್ನು ಶಮನ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು

ರೈತರು ಕೂಲಿಕಾರರ ಕಾರ್ಮಿಕರು ಮಹಿಳೆಯರೆಲ್ಲರು ತಮ್ಮ ಸಂಕೋಲೆಗಳಿಂದ ಹೊರಬರಲು ಸಂಘಟಿತ ಹೋರಾಟ ಒಂದೆ ದಾರಿ ಅದಕ್ಕಾಗಿ ಮುಂದಾಗಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ಜಿ ರಾಮಕೃಷ್ಣ ಎ ಎಲ್ ಶಿವಕುಮಾರ್ ಗುರುಸ್ವಾಮಿ ಆನಂದ್ ಎಸ್.ಕೆ ಶಿವಕುಮಾರ್ ತಿಮ್ಮೇಗೌಡ. .ಮರಿಲಿಂಗೇಗೌಡ. ಸಾಗ್ಯ ರಾಜು ಪ್ರಕಾಶ್ ಮೂರ್ತಿ. ಹಿಪ್ಜುಲ್ಲಾ. ಚಿಕ್ಕಸ್ವಾಮಿ. ಗಣೇಶ್ ಸಿದ್ದರಾಜ್ ರಾಜೇಶ್ ಮಹಾದೇವು. ಪ್ರದೀಪ್ ಮುಂತಾದವರು ಭಾಗವಹಿಸಿದ್ದರು.

Team Newsnap
Leave a Comment
Share
Published by
Team Newsnap

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024