ಕೆ ಆರ್ ಪೇಟೆ ವೃತ್ತದಲ್ಲಿ ಮೋಟಾರ್ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ಬಂಧಿಸಿರುವ ಗ್ರಾಮಾಂತರ ಮತ್ತು ಪಟ್ಟಣ ಪೋಲಿಸರು 27 ವಿವಿಧ ಕಂಪನಿಯ ಮೋಟಾರ್ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಕಟ್ಟೆಕ್ಯಾತನಹಳ್ಳಿ ಗ್ರಾಮದ ಲೋಕೇಶ್ ಪುತ್ರ ವಿಕಾಸ್(21)ನನ್ನು ಬಂಧಿಸಿ 5ಲಕ್ಷ ರು ಬೆಲೆ ಬಾಳುವ 27 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕೆ.ಆರ್.ಪೇಟೆ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯ ಹರಿಹರಪುರ ಗ್ರಾಮದ ವೆಂಕಟೇಶ್ ಪುತ್ರ ಚಿನ್ನು ಅಲಿಯಾಸ್ ಚಿನ್ನಸ್ವಾಮಿ(25)ಯನ್ನು ಬಂಧಿಸಿ 2 ಲಕ್ಷದ 80ಸಾವಿರ ರೂಪಾಯಿ ಬೆಲೆಬಾಳುವ. 10 ವಿವಿಧ ಕಂಪನಿಯ ಮೋಟಾರ್ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂದು ಕೆ.ಆರ್.ಪೇಟೆ ವೃತ್ತ ಆರಕ್ಷಕ ನಿರೀಕ್ಷಕರ ಮುಂಭಾಗದಲ್ಲಿ 27 ಕದ್ದ ಮೋಟಾರ್ ಬೈಕುಗಳೊಂದಿಗೆ ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ