ಆನ್​ಲೈನ್​​ನಲ್ಲಿ ಸಾಲ ಪಡೆದ ವ್ಯಕ್ತಿ ಅಪಮಾನ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ

Team Newsnap
1 Min Read

ಆನ್‌ಲೈನ್‌ನಲ್ಲಿ ಪಡೆದಿದ್ದ ಸಾಲ ಮರುಪಾವತಿಸದ ಆರೋಪ ಮಾಡಿ ಫೇಸ್‌ಬುಕ್‌ ಹ್ಯಾಕ್ ಮಾಡಿ ಎಲ್ಲರಿಗೂ ಅಶ್ಲೀಲ ಮೆಸೇಜ್ ಕಳಿಸಿ ಅವಮಾನ ಮಾಡಿದಕ್ಕೆ ಮನನೊಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.

ಅಂಬರೀಶ್​​ ಕೆ.ಸಿ (39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹಾಸನದ ಉದಯಗಿರಿ ಬಡಾವಣೆಯಲ್ಲಿ ಸೆಕ್ಯೂರಿಟಿ ಜೀನಿಯಸ್ ಎಂಬ ಏಜೆನ್ಸಿ ನಡೆಸುತ್ತಿದ್ದರು.

ಗುರುವಾರ ವಿಷ ಸೇವಿಸಿದ್ದ ಅಂಬರೀಶ್​ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಘಟನೆ ಕುರಿತಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಂಬರೀಶ್​ ಆನ್​​ಲೈನ್​​​ನಲ್ಲಿ ಸಾಲ ಪಡೆದಿದ್ದರು ಇದರಿಂದ ಅವರ ಫೇಸ್​​ಬುಕ್​ ಖಾತೆಯನ್ನು ಅವರ ಸಂಪರ್ಕದಲ್ಲಿದ್ದ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ, ಅಂಬರೀಶ್ ಅವರ ಫೋಟೋ ಎಡಿಟ್​ ಮಾಡಿ ಅಶ್ಲೀಲ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಇದರಿಂದಲೇ ಮನನೊಂದ ಅಂಬರೀಶ್ ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ.

Share This Article
Leave a comment