ಕಳೆದ ರಾತ್ರಿ 10 30 ರ ಸುಮಾರಿಗೆ
ಹೊಸ ವರ್ಷದ ಸಂಭ್ರಮ ಬರ ಮಾಡಿಕೊಳ್ಳಲು ರಸ್ತೆಯ ಮೇಲೆ ಹ್ಯಾಪಿ ನ್ಯೂ ಇಯರ್ ಎಂದು ಬರೆಯುವ ವೇಳೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳದ ಮೀಯಾರು ಕಾಜರ ಬಯಲಿನಲ್ಲಿ ಜರುಗಿದೆ.
ಬಾಗಲಕೋಟೆ ಮೂಲದ ಶರಣ್ ಹಾಗೂ ಸಿದ್ದು ಸಾವನ್ನಪ್ಪಿದರು.
ದುರ್ದೈವಿಗಳು.
ಇಬ್ಬರು ಯುವಕರು ರಸ್ತೆ ಮಧ್ಯೆ ಹೊಸ ವರ್ಷಕ್ಕೆ ಶುಭಾಷಯ ಸಂದೇಶ ಬರೆಯಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಓರ್ವ ಯುವಕ ರಸ್ತೆಯಲ್ಲೇ ಮೃತಪಟ್ಟಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕಾರ್ಕಳ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.