ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಮೇಲೆ ನಿಸಾನ್ ಸಾಹಿಬ್ ಧ್ವಜ ಹಾರಿಸಿದ ಯುವಕನ ಪೋಷಕರು ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದು ಹೋಗಿದ್ದಾರೆ.
ಅಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ 23 ವರ್ಷದ ಜುಗ್ ರಾಜ್ ಸಿಂಗ್ ಪಂಜಾಬ್ ನ ವಾನತಾರ ಗ್ರಾಮದವರು. ಪೋಲಿಸರು ಯುವಕ ನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಭಾವಿಸಿ ಪೋಷಕರು ಗ್ರಾಮ ತೊರೆದಿದ್ದಾರೆ.
ಈಗಾಗಲೇ ಪೋಲಿಸರು ಹಲವು ಬಾರಿ ದಾಳಿ ಮಾಡಿದರೂ ಕೂಡ ಆತನ ಅಜ್ಜ ಮೆಹಲ್ ಸಿಂಗ್ ಹೊರತು ಪಡಿಸಿ ಯಾರೂ ಇಲ್ಲ.
ಈ ಪ್ರಕರಣದಲ್ಲಿ ಜುಗ್ ರಾಜ್ ಸಿಂಗ್ ಧ್ವಜ ಹಾರಿಸುವಂತೆ ಪ್ರೇರಣೆ ನೀಡಿದವರು ಯಾರು ಎಂಬುದನ್ನು ಕೇಂದ್ರ ಸರ್ಕಾರ ರಚನೆ ಮಾಡಿರುವ ಎಸ್ ಐ ಟಿ ಪತ್ತೆ ಮಾಡಲು ಮುಂದಾಗಿದೆ.
ಧ್ವಜ ಹಾರಿಸಿದ ಹಾಗೂ ಗಲಭೆಗೆ ಪ್ರಚೋದನೆ ನೀಡಿದವರಿಗೂ ನೋಟಿಸ್ ಜಾರಿ ಮಾಡಿರುವ ವಿಶೇಷ ತನಿಖಾ ದಳ ( ಎಸ್ ಐ ಟಿ) ತನಿಖೆ ಚುರುಕುಗೊಳಿಸಿದೆ.